ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ʼಒಂದು ಜಿಲ್ಲೆ, ಒಂದು ಉತ್ಪನ್ನ (ಒಡಿಒಪಿ)’ ಉಪಕ್ರಮದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬುದ್ಗಾಂನಿಂದ 2,000 ಕೆಜಿ ವಾಲ್ನಟ್ಗಳನ್ನು ಹೊತ್ತ ಟ್ರಕ್ ಅನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.
ಭಾರತದ ಒಟ್ಟು ವಾಲ್ನಟ್ ಉತ್ಪಾದನೆಯಲ್ಲಿ ಕಾಶ್ಮೀರವು 90% ರಷ್ಟು ಪಾಲು ಪಡೆದಿದೆ. ಉತ್ತಮ ಗುಣಮಟ್ಟ ಮತ್ತು ರುಚಿಯೊಂದಿಗೆ ಕಾಶ್ಮೀರಿ ವಾಲ್ನಟ್ಸ್ ಪೋಷಕಾಂಶಗಳ ಉತ್ತಮ ಮೂಲವಾಗಿದೆ ಮತ್ತು ಇದರಿಂದಲೇ ಪ್ರಪಂಚದಾದ್ಯಂತ ವ್ಯಾಪಕ ಬೇಡಿಕೆಯನ್ನು ಪಡೆದುಕೊಂಡಿದೆ. ಈ ಉತ್ಪನ್ನವು ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಉನ್ನತ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ.
ಕಾಶ್ಮೀರ ವಾಲ್ನಟ್ಸ್ ಅಪಾರ ಪ್ರಮಾಣದಲ್ಲಿ ಲಭ್ಯವಿದ್ದರೂ ವಾಲ್ನಟ್ಸ್ ಅನ್ನು ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ಗಮನಿಸಿ ‘ODOP- ಒಂದು ಜಿಲ್ಲೆ ಒಂದು ಉತ್ಪನ್ನ’ ತಂಡವು ಕಾಶ್ಮೀರದಲ್ಲಿ ಆಳವಾದ ಮಾರುಕಟ್ಟೆ ವಿಶ್ಲೇಷಣೆ ಮತ್ತು ವಾಲ್ನಟ್ ಉತ್ಪಾದಕರೊಂದಿಗೆ ಸಮಾಲೋಚನೆಗಳನ್ನು ಆರಂಭಿಸಿತು. ನಂತರ ಭಾರತದಲ್ಲಿ ವಾಲ್ನಟ್ಸ್ ಆಮದುದಾರರನ್ನು ಸಂಪರ್ಕಿಸಿ ODOP ತಂಡವು ಖರೀದಿಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿತು. ಇಂತಹ ಪ್ರಯತ್ನಗಳು ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಉತ್ತೇಜನ ನೀಡುತ್ತಿದೆ. ಅಮೆರಿಕಾ ಮೂಲದ ವಾಲ್ನಟ್ಸ್ ಅನ್ನು ಆಮದು ಮಾಡಿಕೊಳ್ಳುತ್ತಿದ್ದ ಬೆಂಗಳೂರು ಮೂಲದ ಆಮದುದಾರರು ಈಗ ಆಮದು ವೆಚ್ಚದ ಒಂದು ಭಾಗ ಮೌಲ್ಯದಲ್ಲಿ ಗುಣಮಟ್ಟದ ವಾಲ್ನಟ್ಗಳನ್ನು ವಿತರಿಸಲು ಸಮರ್ಥರಾಗುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.