ನವದೆಹಲಿ: ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರು ನವದೆಹಲಿಯ ಆನಂದ ವಿಹಾರದಲ್ಲಿ ಇಂದು ದೇಶದ ಮೊದಲ ಕ್ರಿಯಾತ್ಮಕ ಸ್ಮೋಗ್ ಟವರ್ ಅನ್ನು ಲೋಕಾರ್ಪಣೆ ಮಾಡಿದರು.
ಈ ಟವರ್ ಗಾಳಿಯ ಗುಣಮಟ್ಟ ಕಾಪಾಡುವ ಪ್ರಯತ್ನಗಳಿಗೆ ಪೂರಕವಾಗಿರಲಿದೆ ಮತ್ತು ಫಲಪ್ರದ ಫಲಿತಾಂಶಗಳನ್ನು ಒದಗಿಸಲಿದೆ. ಎಲ್ಲರೂ ಸ್ವಚ್ಛ ಗಾಳಿ ಸೇವಿಸಲು ಮತ್ತು ಆರೋಗ್ಯಕರ ಜೀವನ ನಡೆಸಲು ಈ ಯೋಜನೆ ಸಹಕಾರಿ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ದೇಶದ 100 ಕ್ಕೂ ಹೆಚ್ಚು ನಗರಗಳಲ್ಲಿ ವಾಯುವಿನ ಗುಣಮಟ್ಟದ ಸಮಗ್ರ ಸುಧಾರಣಾ ಗುರಿಯನ್ನು ಹೊತ್ತು ಹಲವು ಉಪಕ್ರಮಗಳನ್ನು ಆರಂಭಿಸಿದೆ. ಅಂತಹ ಉಪಕ್ರಮಗಳಲ್ಲಿ ಈ ಉಪಕ್ರಮವೂ ಒಂದಾಗಿದೆ. 2018 ಕ್ಕೆ ಹೋಲಿಕೆ ಮಾಡಿದಲ್ಲಿ 2019 ರ ವೇಳೆಗೆ 86 ನಗರಗಳಲ್ಲಿ ವಾಯು ಗುಣಮಟ್ಟ ಸುಧಾರಿಸಿದೆ. 2020 ರಲ್ಲಿ ಈ ಪ್ರಮಾಣ 104 ನಗರಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.