ಪಣಜಿ: ರಾಷ್ಟ್ರಪತಿ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ರಾಮನಾಥ್ ಕೋವಿಂದ್ ಅವರು ಗೋವಾದ ಐಎನ್ಎಸ್ ಹಂಸದಲ್ಲಿ ಭಾರತೀಯ ನೌಕಾಸೇನಾ ವಿಮಾನಯಾನಕ್ಕೆ ಪ್ರೆಸಿಡೆಂಟ್ಸ್ ಕಲರ್ ಅನ್ನು ಪ್ರದಾನಿಸಿದ್ದಾರೆ.
ಶಾಂತಿ ಮತ್ತು ಯುದ್ಧದ ಸಮಯದಲ್ಲಿ ರಾಷ್ಟ್ರಕ್ಕೆ ಸಲ್ಲಿಸಿದ ಅಸಾಧಾರಣ ಸೇವೆಯನ್ನು ಗುರುತಿಸಿ ಮಿಲಿಟರಿ ಘಟಕಕ್ಕೆ ಪ್ರಸಿಡೆಂಟ್ಸ್ ಕಲರ್ ಅನ್ನು ನೀಡಲಾಗುತ್ತದೆ.
ನೌಕಾ ವಿಮಾನಯಾನವು ಕಳೆದ ಏಳು ದಶಕಗಳಲ್ಲಿ ರಾಷ್ಟ್ರಕ್ಕೆ ಗಮನಾರ್ಹ ಮತ್ತು ಧೀರ ಸೇವೆಯನ್ನು ನೀಡುತ್ತಾ ಬಂದಿದೆ.
ಭಾರತೀಯ ನೌಕಾಪಡೆಯು ಈ ಬಗ್ಗೆ ಪ್ರತಿಕ್ರಿಯಿಸಿ, “ಭಾರತೀಯ ನೌಕಾ ವಾಯುಯಾನಕ್ಕೆ ಪ್ರೆಸಿಡೆಂಟ್ಸ್ ಕಲರ್ ಪ್ರಶಸ್ತಿಯು ಶಾಂತಿ ಮತ್ತು ಯುದ್ಧದ ಸಮಯದಲ್ಲಿ ಮಾಡಿದ ಸೇವೆಯನ್ನು ಗುರುತಿಸುತ್ತದೆ” ಎಂದು ಹೇಳಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್, “ನೌಕಾ ವಿಮಾನಗಳು ಶಾಂತಿಕಾಲದಲ್ಲೂ ಮುಂಚೂಣಿಯಲ್ಲಿವೆ ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲೂ ಮುಂಚೂಣಿಯಲ್ಲಿವೆ, ಇದು ನಮ್ಮ ದೇಶವಾಸಿಗಳಿಗೆ ಮಾತ್ರವಲ್ಲದೆ ಮಿತ್ರ ರಾಷ್ಟ್ರಗಳಿಗೂ ಪರಿಹಾರ ನೀಡುತ್ತದೆ” ಎಂದು ಹೇಳಿದರು.
ಸರ್ಕಾರದ ಆತ್ಮನಿರ್ಭರ ಭಾರತ ದೃಷ್ಟಿಕೋನಕ್ಕೆ ಅನುಗುಣವಾಗಿ ಭಾರತೀಯ ನೌಕಾಪಡೆಯ ಸ್ವದೇಶೀಕರಣ ಪ್ರಯತ್ನಗಳನ್ನು ರಾಷ್ಟ್ರಪತಿಗಳು ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.