ನವದೆಹಲಿ: ದೆಹಲಿ ಅಸೆಂಬ್ಲಿ ಶಾಸಕರ ವೇತನ ಪರಿಷ್ಕರಣೆಗೆ ಸ್ವತಂತ್ರ ಸಮಿಯನ್ನು ರಚಿಸಿದೆ. ಈ ಸ್ವತಂತ್ರ ಸಮಿತಿಯು ಹಲವು ತಜ್ಞರ ಸಮ್ಮುಖದಲ್ಲಿ ಶಾಸಕರ ವೇತನ ಮತ್ತು ಭತ್ಯೆಯ ಕುರಿತ ಸಮಗ್ರ ಅಧ್ಯಯನ ಕೈಗೊಂಡು, ಚಾಲ್ತಿಯಲ್ಲಿರುವ ವೇತನ, ಭತ್ಯೆಯ ರಚನೆ, ವೇತನ ಪರಿಷ್ಕರಣೆ ನಡೆಸಲಿದೆ.
ಇಂತಹ ಸಮಿತಿಯನ್ನು ಇದೇ ಮೊದಲ ಬಾರಿಗೆ ರಚಿಸಲಾಗಿದೆ. ಇದನ್ನು ಅಸೆಂಬ್ಲಿಯ ಅವಿರೋಧ ತೀರ್ಪಿನಿಂದಾಗಿ ರಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಸಮಿತಿಯು ಲೋಕಸಭಾ ಕಾರ್ಯದರ್ಶಿ ಪಿಡಿಟಿ ಆಚಾರಿ, ದಿ ಟ್ರಿಬ್ಯೂನ್ನ ಸಹಾಯಕ ಸಂಪಾದಕ ಕೆ.ವಿ. ಪ್ರಸಾದ್, ಸುಪ್ರೀಂ ಕೋರ್ಟ್ ನ್ಯಾ. ಬಲರಾಜ್ ಎಸ್. ಮಲಿಕ್, ದೆಹಲಿ ಅಸೆಂಬ್ಲಿ ಕಾರ್ಯದರ್ಶಿ ಪ್ರಸನ್ನಕುಮಾರ್ ಸೂರ್ಯದೇವರಾ ಇವರನ್ನು ಒಳಗೊಂಡಿದೆ ಎಂದು ಲೋಕಸಭಾ ಸದಸ್ಯ ರಾಮ್ ನಿವಾಸ್ ಗೋಯೆಲ್ ತಿಳಿಸಿದ್ದಾರೆ.
ಸಮಿತಿಯು ಮುಂದಿನ 30 ದಿನಗಳಲ್ಲಿ ತನ್ನ ವರದಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.