ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರದ ಜೀಲಂ ನದಿಯಲ್ಲಿ ಮೊದಲ ಬಸ್ ಬೋಟ್ ಪ್ರಾಯೋಗಿಕ ಸಂಚಾರ ಇಂದಿನಿಂದ ಆರಂಭವಾಗಿದೆ.
ಜಲ ಸಾರಿಗೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಈ ಬಸ್ ಬೋಟ್ ಸಂಚಾರವನ್ನು ಆರಂಭಿಸಲಾಗಿದೆ. ಈ ಅತ್ಯಾಧುನಿಕ ಬೋಟ್ನಲ್ಲಿ 35 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿಗಳಿಗೆ ಕುಳಿತುಕೊಳ್ಳಲು ಅವಕಾಶ ಇದೆ. ಈ ಬೋಟ್ನಲ್ಲಿ ಓರ್ವ ಚಾಲಕ ಮತ್ತು ನಾಲ್ಕು ಮಂದಿ ರಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ. ಈ ಬೋಟ್ ಶ್ರೀನಗರ ಹೊರವಲಯದ ಪಂಥಾ ಚೌಕ್ನಿಂದ ಕಮರ್ವಾರಿಯಾದ ಜೀಲಂ ನದಿಯ ಡೌನ್ಸ್ಟ್ರೀಂ ವರೆಗೆ ಸೇವೆ ನೀಡಲಿದೆ.
ಶ್ರೀನಗರದಲ್ಲಿ ರಸ್ತೆ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮತ್ತು ಜಲ ಸಾರಿಗೆ ವ್ಯವಸ್ಥೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಬಸ್ ಬೋಟ್ ವ್ಯವಸ್ಥೆ ಹೆಚ್ಚು ಸೂಕ್ತವಾಗಿದೆ. ಇದರತ್ತ ಪ್ರಯಾಣಿಕರನ್ನು ಸೆಳೆಯಲು ಆರು ತೇಲುವ ಪ್ಲಾಟಿಂಗ್ ಡಾಕ್ಸ್ಗಳನ್ನು ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಡಿಯಲ್ಲಿ 2 ಕೋಟಿ ರೂ. ಗಳ ಜಾಗತಿಕ ಟೆಂಡರ್ ಮೂಲಕ ಈ ಬಸ್ ಬೋಟ್ ವ್ಯವಸ್ಥೆ ಕಾರ್ಯರೂಪಕ್ಕೆ ತರಲಾಗುತ್ತಿದೆ.
ಈ ಬಸ್ ಬೋಟ್ ಅನ್ನು ನ್ಯೂಜಿಲೆಂಡ್ನಿಂದ ಆಮದು ಮಾಡಲಾಗಿದೆ. ರೆಸ್ಕ್ಯೂ ಬೋಟ್ ಅನ್ನು ದುಬೈ ಮತ್ತು ಲಕ್ಸುರಿ ಬೋಟ್ ಅನ್ನು ಅಮೆರಿಕ ಮತ್ತು ತೈವಾನ್ನಿಂದ ಆರು ಪ್ಲೋಟಿಂಗ್ ಡಾಕ್ಸ್ ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್ ಸ್ವದೇಶಿ ದರ್ಶನ್ ಅಡಿಯಲ್ಲಿ ಈ ಉಪಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.