ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ದೇಶಾದ್ಯಂತ 1 ಲಕ್ಷ ಹಳ್ಳಿಗಳಲ್ಲಿನ ಪ್ರತಿಯೊಂದು ಮನೆಗೂ ಕೇವಲ 23 ತಿಂಗಳುಗಳಲ್ಲಿ ತಲುಪುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
ಈ ಯೋಜನೆಯ ಆರಂಭದ ಸಂದರ್ಭದಲ್ಲಿ ದೇಶದ 18.94 ಕೋಟಿಗಳಷ್ಟು ಗ್ರಾಮೀಣ ಭಾಗದ ಕುಟುಂಬಗಳ ಪೈಕಿ ಕೇವಲ 3.28 ಕೋಟಿ ಕುಟುಂಬಗಳು ಮಾತ್ರವೇ ಕೊಳವೆ ನೀರಿನ ಸಂಪರ್ಕ ಹೊಂದಿದ್ದವು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆ ಜಾರಿಯಾದ ಬಳಿಕ ದೇಶದ 40% ಅಂದರೆ 7.72 ಕೋಟಿ ಕುಟುಂಬಗಳ ಮನೆ ಬಾಗಿಲಿಗೆ ನಲ್ಲಿ ನೀರಿನ ಸೌಲಭ್ಯ ದೊರೆಯುವಂತಾಗಿದೆ. ಗೋವಾ, ತೆಲಂಗಾಣ, ಅಂಡಮಾನ್, ನಿಕೋಬಾರ್, ಪುದುಚೇರಿಗಳಲ್ಲಿನ ಗ್ರಾಮೀಣ ಭಾಗಗಳ ಜನರಿಗೂ ಈ ಸೇವೆ ತಲುಪುವ ಮೂಲಕ ಉದ್ದೇಶಿತ ಗುರಿ ಸಾಧಿಸಿದೆ.
ಕೇಂದ್ರ ಜಲಶಕ್ತಿ ಸಚಿವಾಲಯ ನೀಡಿರುವ ವರದಿಗನುಗುಣವಾಗಿ, ದೇಶದ 71 ಜಿಲ್ಲೆಗಳು, 824 ಬ್ಲಾಕ್ಗಳು, 1,00,275 ಗ್ರಾಮಗಳು ಹರ್ ಘರ್ ಜಲ್ ಗುರಿಯನ್ನು ಸಾಧಿಸಿವೆ.
ಪ್ರಧಾನಿ ಮೋದಿ ಅವರು 2019 ರ ಆಗಸ್ಟ್ 15 ರಂದು ಈ ಯೋಜನೆಯನ್ನು ದೇಶಕ್ಕೆ ಪರಿಚಯಿಸಿದ್ದಾರೆ. ದೇಶದ ಪ್ರತಿಯೊಂದು ಕುಟುಂಬವೂ ಮೂಲಭೂತ ಅಗತ್ಯತೆಯಾದ ನೀರಿನ ಅಭಾವದಿಂದ ಹೊರಬರಬೇಕು. ಪ್ರತಿಯೊಂದು ಮನೆಗೂ ಕೊಳವೆ ಸಂಪರ್ಕಗಳ ಮೂಲಕ ನೀರನ್ನು ಒದಗಿಸುವ ಮೂಲಕ ಜಲಕ್ಷಾಮಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ 3.60 ಲಕ್ಷ ಕೋಟಿ ರೂ. ಗಳನ್ನು ಮೀಸಲಿಡುವ ಮೂಲಕ ಗ್ರಾಮೀಣ ಭಾಗದ ಜನಸಾಮಾನ್ಯರ ನೀರಿನ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.