ನವದೆಹಲಿ: ಕೇದಾರನಾಥ ಚಾರ್ ಧಾಮ್ ದೇವಾಲಯದ ಆವರಣದಲ್ಲಿ 12 ಅಡಿ ಎತ್ತರ ಮತ್ತು 35 ಟನ್ ಭಾರದ ಆದಿ ಶಂಕರಾಚಾರ್ಯರ ಪ್ರತಿಮೆಯು ಒಂದು ತಿಂಗಳ ಅವಧಿಯಲ್ಲಿ ತಲೆ ಎತ್ತಲು ಸಿದ್ಧವಾಗಿದೆ ಎಂದು ವರದಿಗಳು ತಿಳಿಸಿವೆ.
ಉತ್ತರಾಖಂಡದ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಮೈಸೂರಿನ ಶಿಲ್ಪಿಗಳು ಈ ಪ್ರತಿಮೆಯನ್ನು ರಚಿಸಿದ್ದು, ಶಿಲ್ಪಿಗಳ ಕಾರ್ಯ ಅಸಾಧಾರಣವಾಗಿದೆ. ಸುಂದರವಾದ ಪ್ರತಿಮೆಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ್ದಾರೆ.
“ನಮ್ಮ ರಾಜ್ಯದ ಗುರು ಆದಿ ಶಂಕರಾಚಾರ್ಯರ ದೊಡ್ಡ ಗಾತ್ರದ ಪ್ರತಿಮೆಯನ್ನು ನಾವು ಸ್ವಾಗತ್ತೇವೆ, ಇದು ನಮ್ಮೆಲ್ಲರಿಗೂ ಗೌರವದ ಕ್ಷಣವಾಗಿದೆ” ಎಂದು ರಾವತ್ ಹೇಳಿದ್ದಾರೆ.
ಎಂಟನೇ ಶತಮಾನದಲ್ಲಿ ಕೇರಳದಲ್ಲಿ ಜನಿಸಿದ ಆದಿ ಶಂಕರಾಚಾರ್ಯರು ದಾರ್ಶನಿಕರಾಗಿದ್ದರು, ಅವರು ಅದ್ವೈತ ವೇದಾಂತದ ಸಿದ್ಧಾಂತಗಳನ್ನು ಕ್ರೋಢೀಕರಿಸಿದರು ಮತ್ತು ಭಾರತದಾದ್ಯಂತ ನಾಲ್ಕು ಮಠಗಳನ್ನು ಸ್ಥಾಪಿಸುವ ಮೂಲಕ ಹಿಂದೂ ಧರ್ಮವನ್ನು ಏಕೀಕರಿಸುವಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದರು. ಅವರು ಕೇದಾರನಾಥದಲ್ಲಿ ಸಮಾಧಿ ಆಗಿದ್ದಾರೆ ಎಂದು ನಂಬಲಾಗಿದೆ.
“ಕೇದಾರನಾಥದಲ್ಲಿ ಪ್ರತಿಮೆಯನ್ನು ಸ್ಥಾಪಿಸುತ್ತಿರುವುದು ಬಹಳ ಹೆಮ್ಮೆಯ ಕ್ಷಣವಾಗಿದೆ ಮತ್ತುಇದು ಅವರ ಬೋಧನೆಗಳನ್ನು ಅರ್ಥಪೂರ್ಣ ಮತ್ತು ಉತ್ತಮ ಜೀವನಕ್ಕಾಗಿ ಅಳವಡಿಸಿಕೊಳ್ಳಲು ಮತ್ತಷ್ಟು ಪ್ರೇರೇಪಿಸುತ್ತದೆ” ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.