ನವದೆಹಲಿ: ಕೋವಿಡ್ ಲಸಿಕೆ ಕಾರ್ಯಕ್ರಮದ ಆನ್ಲೈನ್ ರಿಜಿಸ್ಟ್ರೇಷನ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಲಸಿಕೆ ಕೇಂದ್ರಕ್ಕೆ ಹೋಗುವ ಪ್ರತಿಯೊಬ್ಬರಿಗೂ ಲಸಿಕೆ ಸಿಗಬೇಕು, ಇದಕ್ಕೆ ಆನ್ಲೈನ್ ರಿಜಿಸ್ಟ್ರೇಷನ್ ಕಡ್ಡಾಯವಾಗಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಲ್ಲದೇ, “ಇಂಟರ್ನೆಟ್ ಇಲ್ಲದವರಿಗೂ ಬದುಕುವ ಹಕ್ಕಿದೆ” ಎಂದು ಟ್ವಿಟ್ ಮಾಡಿದ್ದರು.
ರಾಹುಲ್ ಅವರ ಟ್ವಿಟ್ಗೆ ಕವಿ ಕಬೀರ್ ಅವರ ಕವಿತೆಯ ಮೂಲಕ ಸ್ಮೃತಿ ಇರಾನಿ ಅವರು ತಿರುಗೇಟು ನೀಡಿದ್ದಾರೆ.
“ಅಕೇಶಿಯದ ಬೀಜ ಹಾಕಿ ಮಾವಿನಹಣ್ಣನ್ನು ನಿರೀಕ್ಷಿಸಬಾರದು” ಎಂದು ಸ್ಮೃತಿ ಬರೆದಿದ್ದಾರೆ.
“ಯಾರಿಗೆ ಅರ್ಥ ಆಗುತ್ತದೆಯೋ ಅವರಿಗೆ ಅರ್ಥವಾಗುತ್ತದೆ. ಕೇಂದ್ರ ಸರಕಾರವು ಈಗಾಗಲೇ ರಾಜ್ಯಗಳಿಗೆ ವಾಕ್ ಇನ್ ರಿಜಿಸ್ಟ್ರೇಷನ್ ಗೆ ಅನುಮತಿಯನ್ನು ನೀಡಿದೆ. ಗೊಂದಲವನ್ನು ಹಬ್ಬಿಸಬೇಡಿ, ಲಸಿಕೆಯನ್ನು ಹಾಕಿಸಿಕೊಳ್ಳಿ” ಎಂದು ದಿನಪತ್ರಿಕೆಯ ವಾಕ್ ಇನ್ ರಿಜಿಸ್ಟ್ರೇಷನ್ ಬಗೆಗಿನ ವರದಿ ಸಮೇತ ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳೇ ಕೇಂದ್ರ ಸರಕಾರವು 18-44 ವಯಸ್ಸಿನವರ ವಾಕ್ ಇನ್ ರಿಜಿಸ್ಟ್ರೇಷನ್ ಗೆ ಅನುಮತಿಯನ್ನು ನೀಡಿದೆ. ನೇರವಾಗಿ ಲಸಿಕೆ ಕೇಂದ್ರಕ್ಕೆ ಬಂದು ಇವರು ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿಸಿ ಲಸಿಕೆ ಪಡೆಯಬಹುದು.
कहत कबीर – बोया पेड़ बबूल का, आम कहाँ से होय
समझने वाले समझ गए होंगे।
केंद्र सरकार ने पहले से ही walk-in रेजिस्ट्रेशन के लिए राज्यों को स्वीकृति दे दी है।
भ्रम ना फैलाये, टिका लगवाये। https://t.co/m3ozeHC6vV pic.twitter.com/D6hjl8J1Gw
— Smriti Z Irani (@smritiirani) June 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.