ಬೆಂಗಳೂರು: ಮುಂದಿನ ದಿನಗಳಲ್ಲಿ ಟ್ರಯಾಜ್ ಸೆಂಟರ್ಗಳಿಂದಲೇ ಸೋಂಕಿತರು ಆಸ್ಪತ್ರೆಗಳಲ್ಲಿ ನೇರವಾಗಿ ಹಾಸಿಗೆ ಕಾಯ್ದಿರಿಸಲು ಅನುಕೂಲವಾಗುವಂತಹ ತಂತ್ರಜ್ಞಾನವನ್ನು ಸಚಿವ ಅರವಿಂದ್ ಲಿಂಬಾವಳಿ ಅವರು ಲೋಕಾರ್ಪಣೆ ಮಾಡಿದ್ದಾರೆ.
ಆಸ್ಪತ್ರೆ ಮತ್ತು ಕೊರೋನಾ ಆರೈಕೆ ಕೇಂದ್ರದಲ್ಲಿ ಹಾಸಿಗೆ ಹಂಚಿಕೆಗೆ ಪೂರ್ವಭಾವಿಯಾಗಿ ದೈಹಿಕ ಚಿಕಿತ್ಸಾ ಸರದಿ ನಿರ್ಧಾರವನ್ನು ನಿಧಾನವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಟೆಲಿ ಟ್ರಯಾಜ್ ವ್ಯವಸ್ಥೆ ಮೂಲಕ ಅವಲೋಕನ ನಡೆಸಿ ಆಸ್ಪತ್ರೆಯಲ್ಲಿ ತುರ್ತಾಗಿ ಹಾಸಿಗೆ ವ್ಯವಸ್ಥೆ ಮಾಡಬಹುದು ಎಂದು ತಿಳಿಸಿದ್ದಾರೆ.
ಇದಕ್ಕಾಗಿ ಬಿಬಿಎಂಪಿ ಸಿಎಚ್ಬಿಎಂಎಸ್ ಅನ್ನು ನವೀಕರಿಸಲಾಗಿದೆ. ವಿವರವಾದ ಭೌತಿಕ ಚಿಕಿತ್ಸಾ ಸರದಿ ನಿರ್ಧಾರ ಘಟಕವನ್ನು ಅಭಿವೃದ್ಧಿ ಮಾಡಲಾಗಿದೆ. ಇದರಲ್ಲಿ ಸರದಿ ನಿರ್ಧಾರ ಘಟಕ ಅಳವಡಿಸಲಾಗಿದ್ದು ಬಿಬಿಎಂಪಿಯ 8 ಘಟಕಗಳ 16 ಚಿಕಿತ್ಸೆ ನಿರ್ಧಾರ ಕೇಂದ್ರಗಳಲ್ಲಿ ಬಳಕೆ ಮಾಡಬಹುದಾಗಿದೆ. ನೇರವಾಗಿ ಕೇಂದ್ರಗಳಿಗೆ ಭೇಟಿ ನೀಡುವ ಸೋಂಕಿತರ ತಪಾಸಣೆ ಬಳಿಕ ಅಗತ್ಯ ಬಿದ್ದಲ್ಲಿ ಹಾಸಿಗೆ ಕಾಯ್ದಿರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನೂತನ ವ್ಯವಸ್ಥೆಯನ್ನು ಮೂರು ದಿನಗಳ ಕಾಲ ಪರೀಕ್ಷಿಸಲಾಗಿದ್ದು, 936 ರೋಗಿಗಳನ್ನು ದೈಹಿಕ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.