ನವದೆಹಲಿ: ಕೋವಿಡ್-19 ಪ್ರಕರಣಗಳಲ್ಲಿ ದಾಖಲೆಯ ಏರಿಕೆಯಿಂದ ಉಂಟಾದ ಹಾನಿಯ ಹೊರತಾಗಿಯೂ, ಭಾರತವು ಜಗತ್ತಿನ “ಅತಿದೊಡ್ಡ ಉದಯೋನುಖ ಶಕ್ತಿ” ಯಾಗಿ ಉಳಿದಿದೆ, ಹಲವಾರು ಮೂಲಭೂತ ಸಾಮರ್ಥ್ಯಗಳನ್ನು ಹೊಂದಿದೆ ಮತ್ತು ಇದು ವಿಶ್ವದ “ಅತ್ಯಂತ ಶಕ್ತಿಶಾಲಿ” ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಸೌದಿ ದಿನಪತ್ರಿಕೆಯ ವರದಿ ತಿಳಿಸಿದೆ.
ಅಮೆರಿಕದ ವಿದೇಶಾಂಗ ನೀತಿ ತಜ್ಞ ಡಾ. ಜಾನ್ ಸಿ ಹಲ್ಸ್ಮನ್ ಅವರು ಈ ವರದಿಯಲ್ಲಿ ಭಾರತ ಕೊರೋನಾ ಬಿಕ್ಕಟ್ಟನ್ನು ಎದುರಿಸಿದ ಬಗ್ಗೆ ವ್ಯಕ್ತವಾದ ಟೀಕೆಯನ್ನು ಅಲ್ಲಗೆಳೆದಿದ್ದಾರೆ. ಇತರ ದೇಶಗಳು ಅಸ್ಥಿರತೆ ಹೊಂದಿರುವ ಸಂದರ್ಭದಲ್ಲಿ ಭಾರತದ ರಾಜಕೀಯ ಶಕ್ತಿಯ ರಚನೆ ಸ್ಥಿರವಾಗಿದೆ ಮತ್ತು ಮೋದಿ ಮತ್ತು ಬಿಜೆಪಿ ಎರಡೂ ರಾಜಕೀಯವಾಗಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.
ವೈರಸ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಿಂದಾಗಿ, ಭಾರತವು ತನ್ನ ಆರೋಗ್ಯ ಮೂಲಸೌಕರ್ಯಗಳ ಮೇಲೆ ಒತ್ತಡವನ್ನು ಕಂಡಿತು ಮತ್ತು ನಂತರ ಕೆಲವು ಪಾಶ್ಚಿಮಾತ್ಯ ಮಾಧ್ಯಮಗಳು ಇದರ ಬಗ್ಗೆ ಟೀಕೆ ವ್ಯಕ್ತಪಡಿಸಲು ಪ್ರಾರಂಭಿಸಿದವು.
ಇಂದಿನ ಭಾರತದ ಸಮಸ್ಯೆಗಳನ್ನು ದುರಂತವಾಗಿ ನೋಡುವುದು ವಿಶ್ಲೇಷಣಾತ್ಮಕ ಅಪಾಯವಾಗಿದೆ ಎಂದು ಹಲ್ಸ್ಮನ್ ವಾದಿಸಿದ್ದಾರೆ, ಭಾರತ ಈಗಲೂ ವಿಶ್ವದ “ಶ್ರೇಷ್ಠ ಉದಯೋನ್ಮುಖ ಶಕ್ತಿ” ಯಾಗಿ ಮುಂದುವರಿಯುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.