ನವದೆಹಲಿ: ತೌಕ್ತೆ ಚಂಡಮಾರುತದ ಪರಿಣಾಮವಾಗಿ ಸೋಮವಾರದಿಂದ ಅಲೆಯುತ್ತಿದ್ದ ಬಾರ್ಜ್ ಪಿ -305 ಹಡಗಿನಿಂದ 188 ಜನರನ್ನು ರಕ್ಷಿಸಿರುವ ಐಎನ್ಎಸ್ ಕೊಚ್ಚಿ ಬುಧವಾರ ಮುಂಬಯಿಗೆ ಮರಳಿದೆ.
ರಕ್ಷಿಸಿದ ಸಿಬ್ಬಂದಿಯೊಂದಿಗ ಮತ್ತು ಪ್ರಾಣ ಕಳೆದುಕೊಂಡ 26 ಸಂತ್ರಸ್ತರ ಶವಗಳೊಂದಿಗೆ ಹಡಗು ಮರಳಿದೆ. 49 ಜನರು ಇನ್ನೂ ಕಾಣೆಯಾಗಿದ್ದಾರೆ.
ಐಎನ್ಎಸ್ ಕೊಚ್ಚಿಯ ಕಮಾಂಡಿಂಗ್ ಆಫೀಸರ್ ಕ್ಯಾಪ್ಟನ್ ಸಚಿನ್ ಸಿಕ್ವೇರಾ ಹಡಗು ನೆಲೆಗೆ ಮರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಯುದ್ಧನೌಕೆ ಕಠಿಣ ಪರಿಸ್ಥಿತಿಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ ಎಂದಿದ್ದಾರೆ.
ಕಳಪೆ ಗೋಚರತೆ, ಸುಮಾರು ಗಂಟೆಗೆ 100 ಕಿ.ಮೀ ಗಾಳಿಯ ವೇಗ ಮತ್ತು 9-10 ಮೀಟರ್ ಎತ್ತರಕ್ಕೆ ಅಲೆಗಳು ಘರ್ಜಿಸುತ್ತಿದ್ದ ನಡುವೆ ಕಾರ್ಯಾಚರಣೆಯನ್ನು ಸವಾಲಾಗಿ ಸ್ವೀಕರಿಸಿ ಮಾಡಿದೆವು ಎಂದು ಅವರು ಹೇಳಿದ್ದಾರೆ.
ಐಎನ್ಎಸ್ ಟೆಗ್, ಐಎನ್ಎಸ್ ಬೆಟ್ವಾ, ಐಎನ್ಎಸ್ ಬಿಯಾಸ್ ಪಿ 8 ಐ ವಿಮಾನ ಮತ್ತು ಸೀಕಿಂಗ್ ಹೆಲೋಸ್ ಇನ್ನೂ ಬದುಕುಳಿದವರನ್ನು ಪತ್ತೆ ಹಚ್ಚಲು ಪ್ರಯತ್ನ ಮುಂದುವರೆಸಿದೆ. ಸಮುದ್ರ ಪರಿಸ್ಥಿತಿಗಳು ಈಗ ಸುಧಾರಿಸಿದೆ ಎಂದು ಕ್ಯಾಪ್ಟನ್ ಸಿಕ್ವೇರಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.