ನವದೆಹಲಿ: ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್ ಮನೀಂದ್ರ ಅಗ್ರವಾಲ್ ನೇತೃತ್ವದ ಸಂಶೋಧಕರ ತಂಡವು ದೇಶದಲ್ಲಿ ಕೋವಿಡ್ ಹರಡುವಿಕೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದು, ತಮ್ಮ ಗಣಿತದ ಮಾದರಿಯಾದ ʼಸೂತ್ರʼವನ್ನು ಆಧರಿಸಿ ಕೆಲವೊಂದು ಊಹೆಗಳನ್ನು ಮಾಡಿದೆ.
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಮೇ ಅಂತ್ಯದ ವೇಳೆಗೆ ಅಂತ್ಯಗೊಳ್ಳುತ್ತದೆ ಎಂದು ಈ ಸಂಶೋಧಕರು ಈ ಮೊದಲೇ ಊಹಿಸಿದ್ದಾರೆ.
ಈಗಿನ ಅವರ ಅಧ್ಯಯನವು ಮುಂದಿನ ದಿನಗಳಲ್ಲಿ ಪ್ರಕರಣಗಳು ತೀವ್ರವಾಗಿ ಕಡಿಮೆಯಾಗುತ್ತವೆ ಎಂದು ಹೇಳಿವೆ.
ಹೊಸ ಕೋವಿಡ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಆದರೆ ಅದು ನಿಜವಾಗಿಯೂ ಅಲೆ ಅಂತ್ಯಗೊಂಡಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರೊಫೆಸರ್ ಮನೀಂದ್ರ ಅಗ್ರವಾಲ್ ಅವರು, ಅಲೆಯು ಕೊನೆಗೊಂಡಿದೆ ಎಂದು ಈಗಲೇ ಹೇಳುವುದು ಕಷ್ಟ ಎಂದಿದ್ದಾರೆ.
ಪ್ರಕರಣಗಳು ಇನ್ನೂ ಹೆಚ್ಚುತ್ತಿರುವ ದಕ್ಷಿಣ ರಾಜ್ಯಗಳ ಬಗ್ಗೆ ವಿಶೇಷವಾಗಿ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಬಗ್ಗೆ ಮಾತನಾಡಿದ ಅವರು, ಈ ಭಾಗಗಳಲ್ಲಿ, ಕೋವಿಡ್ ಉತ್ತುಂಗದಲ್ಲಿದೆ, ಒಟ್ಟಾರೆಯಾಗಿ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ ಎಂದಿದ್ದಾರೆ.
ಇವರ ತಂಡವು ಕೋವಿಡ್ನ ಗರಿಷ್ಠ ಮತ್ತು ವೇಗದ ಬಗ್ಗೆ ನಗರಗಳ ದತ್ತಾಂಶ ಅಧ್ಯಯನಗಳನ್ನು ವಿಶೇಷ ಗಣಿತ ಮಾದರಿ ಸೂತ್ರದ ಪ್ರಕಾರ ಬಿಡುಗಡೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.