News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರತಿ ಜಿಲ್ಲೆಯಲ್ಲಿ 50 ಆಮ್ಲಜನಕ ಹಾಸಿಗೆಗಳನ್ನು ಅಳವಡಿಸಲಿದೆ ಯೋಗಿ ಸರ್ಕಾರ

ನವದೆಹಲಿ: ಉತ್ತರಪ್ರದೇಶದ ಯೋಗಿ  ಆದಿತ್ಯನಾಥ ಸರ್ಕಾರ ಪ್ರತಿ ಜಿಲ್ಲೆಯಲ್ಲಿ 50 ಆಮ್ಲಜನಕ ಹಾಸಿಗೆಗಳನ್ನು ಅಳವಡಿಸಲು ಮುಂದಾಗಿದೆ. ಎಲ್ಲಾ ಜಿಲ್ಲೆಗಳ  ಪ್ರತಿ ವಿಭಾಗದಲ್ಲಿ ಕನಿಷ್ಠ ಎರಡು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (ಸಿಎಚ್‌ಸಿ) ಮೂಲಸೌಕರ್ಯಗಳನ್ನು ಗುರುತಿಸಿ ಬಲಪಡಿಸುವಂತೆ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರ್ದೇಶಿಸಿದ್ದಾರೆ.

ಗುರುತಿಸಲಾದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಸಿಗೆಗಳು, ಆಮ್ಲಜನಕ ಪೂರೈಕೆ (ಆಮ್ಲಜನಕ ಉತ್ಪಾದನಾ ಘಟಕ ಅಥವಾ ಆಮ್ಲಜನಕ ಸಾಂದ್ರಕಗಳು ಅಥವಾ ಜಂಬೊ ಸಿಲಿಂಡರ್‌ಗಳು), ವೈದ್ಯರು, ದಾದಿಯರು, ಅಗತ್ಯ ಔಷಧಿಗಳು ಮತ್ತು ಪರೀಕ್ಷಾ ಸೌಲಭ್ಯಗಳಂತಹ ಅಗತ್ಯ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಕೋವಿಡ್ ಗ್ರಾಮೀಣ ಪ್ರದೇಶಗಳಲ್ಲೂ ನಿಧಾನವಾಗಿ ಪಸರುತ್ತಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಾಮೀಣ ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಬಲಪಡಿಸಲು ರಾಜ್ಯ ಸರ್ಕಾರ ಇದನ್ನು ಆದ್ಯತೆಯಾಗಿ ತೆಗೆದುಕೊಂಡಿದೆ.

ಸರ್ಕಾರಿ ವಕ್ತಾರರ ಪ್ರಕಾರ, ಅಗತ್ಯವಿದ್ದರೆ ವಾರ್ಡ್‌ಗಳು ಮತ್ತು ಸ್ನಾನಗೃಹಗಳ ದುರಸ್ತಿ ಮತ್ತು ನವೀಕರಣವನ್ನು ಮುಂದಿನ ಒಂದು ವಾರದಲ್ಲಿ ಮಾಡಬೇಕಾಗಿದೆ. ಅಲ್ಲದೆ, ಔಷಧಿಗಳು, ಸಲಕರಣೆಗಳು ಮತ್ತು ಅಂದಾಜಿನ ಅವಶ್ಯಕತೆಗಳನ್ನು ಶೀಘ್ರದಲ್ಲಿಯೇ ಮುಖ್ಯ ವೈದ್ಯಕೀಯ ಅಧಿಕಾರಿಗೆ ಕಳುಹಿಸಬೇಕಾಗಿದೆ. ನಂತರ ಅವರು ಇದನ್ನು ಪೂರೈಸುವ ಕಾರ್ಯವನ್ನು ಮಾಡಲಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top