News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಷ್ಟದಿಂದ ಜಗತ್ತಿನ ಅರಿವು

Puttur News Logoಪುತ್ತೂರು : ಕಷ್ಟದಿಂದ ಮಾತ್ರ ಜಗತ್ತನ್ನು ತಿಳಿದುಕೊಳ್ಳಲು ಸಾಧ್ಯ. ಆದ್ದರಿಂದ ಭಗವಂತ ನೀಡಿದ ಕಷ್ಟ ನಮ್ಮಿಂದ ಸಾರ್ಥಕ ಕೆಲಸ ಮಾಡಿಸುತ್ತಿದೆ ಎಂದು ಡಾ.ಶ್ರೀಶ ಕುಮಾರ್ ಹೇಳಿದರು.ಪುತ್ತೂರು ಸೀಮೆ ದೈವಸ್ಥಾನ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಮ್ಮಿಕೊಂಡ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.

ಹಿರಿಯರು ಮಾಡಿದ ದೂರ ದೃಷ್ಟಿಯ ಆಲೋಚನೆಯ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ನಾವು ಉತ್ತಮ ಸಂಸ್ಕಾರ ಬೆಳೆಸಿಕೊಂಡು ಹೋದರೆ ಮುಂದಿನ ಪೀಳಿಗೆಗೆ ಇದು ಮಾರ್ಗದರ್ಶಿ ಆಗುತ್ತದೆ. ಶ್ರೇಷ್ಠ ಕೆಲಸದ ಕೈಂಕರ್ಯವನ್ನು ಮುಂದುವರಿಸುವ ಕೆಲಸ ಆಗಬೇಕು. ಕರಸೇವೆಯ ಪ್ರೀತಿ ನಿರಂತರವಾಗಿರಲಿ. ಇದರಿಂದ ಆರೋಗ್ಯ, ನೆಮ್ಮದಿ ಸದಾ ನೆಲೆಸುತ್ತದೆ ಎಂದರು.

ಆರು ತಿಂಗಳಲ್ಲಿ ಬಲ್ನಾಡು ದೈವಸ್ಥಾನ ನಿರ್ಮಾಣವಾಗಿದೆ ಎಂದರೆ ಅದು ಬೆವರಿನ ಪರಿಶ್ರಮದಿಂದ ಸಾಧ್ಯವಾಯಿತು. ಕಲಿಯುಗದಲ್ಲಿ ಫಲಿತಾಂಶ ಹಾಗೂ ಫಲ ಎರಡೂ ಶೀಘ್ರದಲ್ಲೇ ದೊರಕುತ್ತದೆ. ಆದ್ದರಿಂದ ನಮ್ಮೊಳಗಿನ ಮಹಿಷಾಸುರನ ಮರ್ಧನ ಮಾಡಬೇಕು. ಸೇವೆಯಿಂದ ದೇವ ಋಣ, ಸಂತತಿಯಿಂದ ಪಿತೃಋಣ, ಇನ್ನೊಬ್ಬರಿಗೆ ನೀಡುವ ಗುಣದಿಂದ ಆಚಾರ್ಯ ಋಣವನ್ನು ತೀರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಸ್ವಪ್ರೇರಣೆಯಿಂದಲೇ ಕೆಲಸ ನಿರ್ವಹಿಸಿದರಿಂದ ಯಶಸ್ಸು ಸಿಕ್ಕಿದೆ. ಶಿಲೆ, ಗೋಪುರದ ಕೆಲಸ ಬಿಟ್ಟರೆ ಉಳಿದವೆಲ್ಲ ಕೆಲಸ ಕರಸೇವೆ ಮೂಲಕವೇ ನಡೆದಿದೆ. ದೈವಸ್ಥಾನದ 10 ಎಕರೆ ಜಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರ ಬೆಳೆಸುವ ಯೋಜನೆಯಿದೆ. ಇದು ಪ್ರತಿ ಮನೆಯಲ್ಲಿಯೂ ನೆಡಬೇಕು. ಮುಂದಿನ ಪೀಳಿಗೆಗೆ ಇದು ಆದರ್ಶವಾಗಿರಲಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ ಮಾತನಾಡಿ, ತಾಯಿ ಉಳ್ಳಾಲ್ತಿಗೋಸ್ಕರ ಕೆಲಸ ನಡೆದಿದೆಯೇ ಹೊರತು, ಹೆಸರಿಗೋಸ್ಕರ ಅಲ್ಲ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಪಾಕಶಾಲೆ, ಭಂಡಾರದ ಮನೆ, ಸಾಮಗ್ರಿ ಕೊಠಡಿಯ ಕೆಲಸ ನಡೆಯುತ್ತಿದೆ ಎಂದರು. ವಕೀಲ ಚಿದಾನಂದ ಬೈಲಾಡಿ, ಬಾಬು ಕುಕ್ಕುತ್ತಡಿ, ಗದಾಧರ ಮಲ್ಲಾರ್ ಅನಿಸಿಕೆ ವ್ಯಕ್ತಪಡಿಸಿದರು. ತುಷಾರ್‌ಗೋಪಾಲ್ ಕಲ್ಲಾಜೆ ಪ್ರಾರ್ಥಿಸಿ, ಕರಸೇವಾ ಸಮಿತಿ ಸಂಚಾಲಕ ಪ್ರಕಾಶ್ ಕೆಲ್ಲಾಡಿ ವಂದಿಸಿದರು. ಮಾಧವ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top