ನವದೆಹಲಿ: ಭಾರತೀಯ ವಾಯುಪಡೆ ದೊಡ್ಡ ಪ್ರಮಾಣದ ಆಮ್ಲಜನಕ ಟ್ಯಾಂಕರ್ಗಳನ್ನು ದೇಶಾದ್ಯಂತದಿಂದ ಭರ್ತಿ ಕೇಂದ್ರಗಳಿಗೆ ಏರ್ ಲಿಫ್ಟ್ ಮಾಡುವ ಕಾರ್ಯವನ್ನು ಪ್ರಾರಂಭಿಸಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿದೆ.
ಕಾರ್ಯಾಚರಣೆಯ ಭಾಗವಾಗಿ, ಐಎಎಫ್ನ ಸಿ -17 ಮತ್ತು ಐಎಲ್ -76 ವಿಮಾನಗಳು ಎರಡು ಖಾಲಿ ಕ್ರಯೋಜೆನಿಕ್ ಆಮ್ಲಜನಕ ಕಂಟೇನರ್ಗಳನ್ನು ಏರ್ ಲಿಫ್ಟ್ ಮಾಡಿವೆ ಮತ್ತು ಒಂದು ಐಎಲ್ -76 ವಿಮಾನವು ನಿನ್ನೆ ಒಂದು ಖಾಲಿ ಕಂಟೇನರ್ ಅನ್ನು ಪನಗಢಕ್ಕೆ ಏರ್ ಲಿಫ್ಟ್ ಮಾಡಿದೆ. ಅಲ್ಲಿ ಈ ಟ್ಯಾಂಕರ್ಗಳಿಗೆ ಆಮ್ಲಜನಕ ಭರ್ತಿ ಮಾಡಿ ದೇಶದಾದ್ಯಂತ ಪೂರೈಕೆ ಮಾಡಲಾಗುತ್ತದೆ ಎಂದು ಐಎಎಫ್ ತಿಳಿಸಿದೆ.
ಕೋವಿಡ್-9 ಪ್ರಕರಣಗಳು ಮತ್ತು ಸಾವುಗಳು ಹೆಚ್ಚುತ್ತಲೇ ಇರುವುದರಿಂದ ದೇಶದ ವಿವಿಧ ಭಾಗಗಳಲ್ಲಿ ಆಮ್ಲಜನಕದ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾಯುಸೇನೆಯು ಪೂರೈಕೆಯನ್ನು ತ್ವರಿತಗೊಳಿಸಲು ಈ ಮಹತ್ವದ ಕಾರ್ಯಾಚರಣೆಗಿಳಿದೆ.
ದೇಶಾದ್ಯಂತ ಆಮ್ಲಜನಕದ ಪೂರೈಕೆಯನ್ನು ಪರಿಶೀಲಿಸಲು ಮತ್ತು ಅದರ ಲಭ್ಯತೆಯನ್ನು ಹೆಚ್ಚಿಸುವ ಮಾರ್ಗಗಳು ಮತ್ತು ವಿಧಾನಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು.
ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಅಧಿಕೃತ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಕೋವಿಡ್-19 ನಿಂದಾಗಿ ದೇಶವು 2,263 ಹೊಸ ಸಾವುಗಳನ್ನು ದಾಖಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.