ನವದೆಹಲಿ: ದೇಶದ ಹೈಡ್ರೋಜನ್ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಉತ್ತೇಜನ ನೀಡಲು ಭಾರತ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
“ಹೈಡ್ರೋಜನ್ ಎಕಾನಮಿ: ನ್ಯೂದಿಲ್ಲಿ ಡೈಲಾಗ್ –2021” ಸಮ್ಮೇಳವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಬ್ಲೂ ಹೈಡ್ರೋಜನ್, ಹೈಡ್ರೋಜನ್ ಸಿಎನ್ಜಿ (ಎಚ್-ಸಿಎನ್ಜಿ) ಮತ್ತು ಗ್ರೀನ್ ಹೈಡ್ರೋಜನ್ ಕುರಿತು ಪ್ರಾಯೋಗಿಕ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ತಾಂತ್ರಿಕ ಪ್ರಗತಿಯ ಮೂಲಕ, ನಾವು ಸಾರಿಗೆ ಇಂಧನವಾಗಿ ಮತ್ತು ಸಂಸ್ಕರಣಾಗಾರಗಳಿಗೆ ಕೈಗಾರಿಕಾ ಇನ್ಪುಟ್ ಆಗಿ ಬಳಸಲು ಕಂಪ್ರೆಸ್ಡ್ ನೈಸರ್ಗಿಕ ಅನಿಲದೊಂದಿಗೆ ಹೈಡ್ರೋಜನ್ ಅನ್ನು ಮಿಶ್ರಣ ಮಾಡುತ್ತಿದ್ದೇವೆ. ದೆಹಲಿಯ 50 ಬಸ್ಸುಗಳು ಪ್ರಾಯೋಗಿಕ ಆಧಾರದ ಮೇಲೆ ಕಂಪ್ರೆಸ್ಡ್ ನೈಸರ್ಗಿಕ ಅನಿಲದಲ್ಲಿ ಮಿಶ್ರಿತ ಹೈಡ್ರೋಜನ್ ಮೂಲಕ ನಡೆಯುತ್ತಿವೆ. ಮುಂಬರುವ ತಿಂಗಳುಗಳಲ್ಲಿ ಭಾರತದ ಪ್ರಮುಖ ನಗರಗಳಲ್ಲಿ ಇದನ್ನು ಹೆಚ್ಚಿಸಲು ನಾವು ಯೋಜಿಸುತ್ತಿದ್ದೇವೆ “ಎಂದಿದ್ದಾರೆ.
ದೇಶಕ್ಕೆ ಹೈಡ್ರೋಜನ್ ಮಾರ್ಗಸೂಚಿಯನ್ನು ತಯಾರಿಸಲು ಕೇಂದ್ರ ಸರ್ಕಾರ 2021 ರಲ್ಲಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಅನ್ನು ಪ್ರಕಟಿಸಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ಪರಿಸರ ಮತ್ತು ಹವಾಮಾನ ಸಂರಕ್ಷಣೆಗಳಿಗೆ ಬದ್ಧವಾಗಿದೆ ಎಂದ ಸಚಿವರು, ಕಳೆದ ಆರು ವರ್ಷಗಳಲ್ಲಿ ಭಾರತ ತನ್ನ ನವೀಕರಿಸಬಹುದಾದ ವಿದ್ಯುತ್ ಬಂಡವಾಳವನ್ನು 32 ಜಿವ್ಯಾಟ್ನಿಂದ ಸುಮಾರು 100 ಜಿವ್ಯಾಟ್ಗೆ ಹೆಚ್ಚಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.