ನವದೆಹಲಿ: ಪೌಷ್ಠಿಕಾಂಶ ಸಮತೋಲಿತ ಆಹಾರದ ಅಗತ್ಯವನ್ನು ಉತ್ತೇಜಿಸುವ ಮತ್ತು ಎಲ್ಲಾ ಸ್ಥಳೀಯ ಹಣ್ಣುಗಳ ಮತ್ತು ತರಕಾರಿಗಳ ಲಭ್ಯತೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಇಂದು “ಆಹಾರ ಕ್ರಾಂತಿ” ಮಿಷನ್ ಅನ್ನು ಪ್ರಾರಂಭಿಸಲಿದ್ದಾರೆ.
“ಗುಡ್ ಡಯಟ್-ಗುಡ್ ಕಾಗ್ನಿಷನ್” ಎಂಬ ಧ್ಯೇಯವಾಕ್ಯದೊಂದಿಗೆ ವಿಜ್ಞಾನ ಭಾರತಿ (ವಿಭಾ) ಮತ್ತು ಗ್ಲೋಬಲ್ ಇಂಡಿಯನ್ ಸೈಂಟಿಸ್ಟ್ಸ್ ಮತ್ತು ಟೆಕ್ನೋಕ್ರಾಟ್ಸ್ ಫೋರಂ (ಜಿಐಎಸ್ಟಿ) ಈ ಮಿಷನ್ ಅನ್ನು ಪ್ರಾರಂಭಿಸುತ್ತಿದೆ.
ಅಧಿಕೃತ ಹೇಳಿಕೆಯ ಪ್ರಕಾರ, “ಹಸಿವು ಮತ್ತು ರೋಗಗಳ ವಿಷಯದಲ್ಲಿ ಭಾರತ ಮತ್ತು ಜಗತ್ತು ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸಲು ಈ ಮಿಷನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಜನರನ್ನು ಭಾರತದ ಸಾಂಪ್ರದಾಯಿಕ ಆಹಾರದ ಮೌಲ್ಯಗಳಿಗೆ ಒಳಪಡುವಂತೆ ಪ್ರಚೋದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಸ್ಥಳೀಯ ಹಣ್ಣುಗಳು ಮತ್ತು ತರಕಾರಿಗಳ ಪ್ರಯೋಜನ ಮತ್ತು ಸಮತೋಲಿತ ಆಹಾರದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಿದೆ”.
ಸ್ಥಳೀಯವಾದ ಹಣ್ಣುಗಳು ಮತ್ತು ತರಕಾರಿಗಳಲ್ಲಿ ತುಂಬಿರುವ ಪೌಷ್ಠಿಕಾಂಶದ ಸಮತೋಲಿತ ಅಂಶಗಳತ್ತ ಗಮನವನ್ನು ನವೀಕರಿಸಲು ಮಿಷನ್ ಪ್ರಯತ್ನಿಸುತ್ತದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತರಬೇತಿ ನೀಡಿ ಮತ್ತು ಅವರ ಮೂಲಕ ಕುಟುಂಬಗಳಿಗೆ ಮತ್ತು ಸಮಾಜಕ್ಕೆ ಸಂದೇಶವನ್ನು ರವಾನಿಸುವ ಮೇಲೆ ಈ ಮಿಷನ್ ಗಮನ ಹರಿಸುತ್ತದೆ.
ಭಾರತವು ಸೇವಿಸುವ ಕ್ಯಾಲೊರಿಗಿಂತ ಎರಡು ಪಟ್ಟು ಹೆಚ್ಚು ಉತ್ಪಾದಿಸುತ್ತದೆ ಎಂಬುದನ್ನು ಗಮನಿಸಬೇಕು. ಆದರೂ, ದೇಶದಲ್ಲಿ ಅನೇಕರು ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನಮ್ಮ ಸಮಾಜದ ಎಲ್ಲಾ ವರ್ಗಗಳಲ್ಲಿ ಇರುವ ಪೌಷ್ಠಿಕಾಂಶದ ಅರಿವಿನ ಕೊರತೆಯು ಈ ವಿದ್ಯಮಾನಕ್ಕೆ ಕಾರಣವಾಗಿದೆ. ಈ ಮಿಷನ್ ಸಮಸ್ಯೆಯ ಮೂಲ ಕಾರಣವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.