News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೆಟ್ರೊಮ್ಯಾನ್ ಇ ಶ್ರೀಧರನ್‌ ಅವರ ಚುನಾವಣಾ ಸ್ಪರ್ಧೆಗೆ ಮೋಹನ್‌ ಲಾಲ್ ಶ್ಲಾಘನೆ

ತಿರುವನಂತಪುರಂ:  ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಮೋಹನ್ ಲಾಲ್ ಅವರು ಗುರುವಾರ ಮೆಟ್ರೊಮ್ಯಾನ್ ಇ ಶ್ರೀಧರನ್ ಅವರ ಚುನಾವಣಾ ಸ್ಪರ್ಧೆಯನ್ನು ಶ್ಲಾಘಿಸಿದ್ದಾರೆ. ವೀಡಿಯೊ ಸಂದೇಶದಲ್ಲಿ, ಮೋಹನ್ ಲಾಲ್ ಅವರು ಶ್ರೀಧರನ್ ಅವರ ಸಾಧನೆಗಳನ್ನು ಶ್ಲಾಘಿಸಿದ್ದಾರೆ ಮತ್ತು ಭವಿಷ್ಯದಲ್ಲಿ ದೇಶವನ್ನು ಮುನ್ನಡೆಸಲು ಅವರ ಸೇವೆಗಳು ಇನ್ನೂ ಅಗತ್ಯವಿದೆ ಎಂದು ಹೇಳಿದ್ದಾರೆ.

ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಧರನ್‌ ಅವರನ್ನು ಶ್ಲಾಘಿಸಿದ ಮೋಹನ್ ಲಾಲ್, ಶ್ರೀಧರನ್ ಅವರ ಇಚ್ಛಾಶಕ್ತಿಯಿಂದಾಗಿ 46 ದಿನಗಳಲ್ಲಿ ಚಂಡಮಾರುತದಲ್ಲಿ ಹಾನಿಗೊಳಗಾದ ಪಂಬನ್ ಸೇತುವೆಯ ಪುನರ್‌ ನಿರ್ಮಾಣಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.

ಇದು ಒಂದು ಅಸಾಧ್ಯ ಸಾಧನೆ ಎಂದು ಜಗತ್ತು ಭಾವಿಸಿದ ಸಮಯದಲ್ಲಿ ಶ್ರೀಧರನ್ ಅವರು ಕೊಂಕಣ್ ರೈಲ್ವೆಯನ್ನು ನಿಜವಾಗಿಸಿದರು ಎಂದು ಮೋಹನ್‌ ಲಾಲ್‌ ಹೇಳಿದ್ದಾರೆ.

“ದೇಶವನ್ನು ಅಭಿವೃದ್ಧಿಯ ಹೊಸ ಹಾದಿಯಲ್ಲಿ ಮುನ್ನಡೆಸಲು ನಮಗೆ ಇನ್ನೂ ಅವರ ಸೇವೆಗಳು ಬೇಕಾಗುತ್ತವೆ ಮತ್ತು ಶ್ರೀಧರನ್ ಸರ್ ಅವರಿಗೆ ನಾನು ಶುಭ ಹಾರೈಸುತ್ತೇನೆ” ಎಂದು ಮೋಹನ್ ಲಾಲ್ ಹೇಳಿದ್ದಾರೆ.

ಇ ಶ್ರೀಧರನ್ ಅವರ ಬಗ್ಗೆ ಮೋಹನ್ ಲಾಲ್ ಅವರ ಶ್ಲಾಘನೆಯು ಮತದಾನದ ಮೇಲೆ ಭಾರಿ ಪರಿಣಾಮ ಬೀರಬಲ್ಲದು ಎಂದು ಊಹಿಸಲಾಗಿದೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top