ಲಕ್ನೋ: ತಮ್ಮ ರಾಜ್ಯದ ಒಂದು ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳನ್ನು ಸುಧಾರಿಸುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಯತ್ನಗಳು ಫಲಿತಾಂಶವನ್ನು ತೋರಿಸುತ್ತಿವೆ. ಆದಿತ್ಯನಾಥ್ ಸರ್ಕಾರದ ಪ್ರಯತ್ನದಲ್ಲಿ ಶಾಲೆಗಳು ಸುಧಾರಣೆಯಾಗುತ್ತಿವೆ ಎಂದು ವರದಿಯಾಗಿದ್ದು, ಅವುಗಳು ಮೂಲಭೂತ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ಕಾನ್ವೆಂಟ್ ಶಾಲೆಗಳನ್ನು ಮೀರಿಸಿದೆ ಎನ್ನಲಾಗಿದೆ.
‘ಆಪರೇಷನ್ ಕಾಯಕಲ್ಪ್’ ಉಪಕ್ರಮದಡಿ ಶಾಲೆಗಳ ಪುನರುಜ್ಜೀವನ ಮತ್ತು ಸುಧಾರಣೆ ನಡೆಯುತ್ತಿದೆ. ರಾಜ್ಯದ ಪ್ರಾಥಮಿಕ ಶಾಲೆಗಳನ್ನು ಪರಿವರ್ತಿಸುವ ಗುರಿಯೊಂದಿಗೆ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು ಈ ಉಪಕ್ರಮ ಈಗ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸಿದೆ.
ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳನ್ನು ನವೀಕರಿಸಿದ ಶಾಲೆಗಳ ಸಂಖ್ಯೆ 1.39 ಲಕ್ಷ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.
ಈ ಶಾಲೆಗಳಲ್ಲಿ ಈಗ ಸ್ಮಾರ್ಟ್ ತರಗತಿ ಕೊಠಡಿಗಳು, ಗ್ರಂಥಾಲಯಗಳು, ಆಟದ ಮೈದಾನಗಳು, ಶೌಚಾಲಯಗಳು ಮತ್ತು ಕುಡಿಯುವ ನೀರು ಇದೆ.
ಸೌಲಭ್ಯಗಳನ್ನು ನವೀಕರಿಸಿದ ಪ್ರಾಥಮಿಕ ಶಾಲೆಗಳು ಬರಾಬಂಕಿ, ಹಿಲಾಲ್ಪುರ, ಹೀರ್ಪುರ, ಹಾರ್ಡೊಯ್ ಅನ್ನು ಒಳಗೊಂಡಂತೆ ರಾಜ್ಯದಾದ್ಯಂತ ಹರಡಿವೆ.
ಈ ಸುಧಾರಣೆಯು ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಪಾಲಕರು ಮತ್ತು ಪೋಷಕರು ರಾಜ್ಯದ ದುಬಾರಿ ಖಾಸಗಿ ಶಾಲೆಗಳ ಬದಲು ಈ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಆದ್ಯತೆ ನೀಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.