ಹರಿದ್ವಾರ: ಉತ್ತರಾಖಂಡದಲ್ಲಿ ಕುಂಭಮೇಳ ಪೊಲೀಸರು ನಡೆಸಿದ ಅಭಿಯಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಅಭಿಯಾನ 24 ಭಿಕ್ಷುಕರ ಜೀವನ ಶಾಶ್ವತವಾಗಿ ಬದಲಾಯಿಸಿದೆ. 2021 ರ ಜನವರಿಯಲ್ಲಿ, ಕುಂಭಮೇಳಕ್ಕೆ ಸಿದ್ಧತೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಪೊಲೀಸರು ನಿರ್ಧರಿಸಿದರು. ಡಿಜಿಪಿ ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ಭಿಕ್ಷುಕರನ್ನು ಮುಖ್ಯವಾಹಿನಿಯ ಆರ್ಥಿಕತೆಗೆ ತರಲು ಪೊಲೀಸರು ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಕುಂಭ ಪೊಲೀಸರ ತಂಡ ಹರ್ ಕಿ ಪೌಡಿಗೆ ತೆರಳಿ ಆ ಪ್ರದೇಶದಲ್ಲಿ ಭಿಕ್ಷುಕರನ್ನು ಸಂಪರ್ಕಿಸಿತು ಮತ್ತು ಅವರನ್ನು ಭಿಕ್ಷುಕ ಆಶ್ರಯ ಮನೆಗಳಿಗೆ ಸ್ಥಳಾಂತರ ಮಾಡಿತು. ಎಲ್ಲಾ ಭಿಕ್ಷುಕರಿಗೆ ವೃತ್ತಿಪರರಿಂದ ಹೇರ್ ಕಟ್ ಮಾಡಲಾಯಿತು ಮತ್ತು ಮೇಕ್ ಓವರ್ ಮಾಡಲಾಯಿತು. ಎಲ್ಲಾ ಭಿಕ್ಷುಕರಿಗೆ ಕೋವಿಡ್ -19 ಪರೀಕ್ಷೆ ನಡೆಸಲಾಯಿತು ಮತ್ತು ವೈದ್ಯಕೀಯ ತಂಡದಿಂದ ಅಗತ್ಯವಾದ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಯಿತು, ಅವರಿಗೆ ಉದ್ಯೋಗವನ್ನು ಪ್ರಾರಂಭಿಸುವ ಉಪಕ್ರಮ ಹಮ್ಮಿಕೊಳ್ಳಲಾಯಿತು.
ಕೆಲವು ಭಿಕ್ಷುಕರು ತಮ್ಮ ಸ್ಥಳೀಯ ಸ್ಥಳಗಳಿಗೆ ಹಿಂದಿರುಗಿ ಅಲ್ಲಿ ಹೊಸ ಜೀವನವನ್ನು ಪ್ರಾರಂಭಿಸಲು ಬಯಸಿದ್ದರು, ಇದಕ್ಕೂ ಪೊಲೀಸ್ ತಂಡವು ವ್ಯವಸ್ಥೆ ಮಾಡಿತು. ಕೆಲ ಭಿಕ್ಷುಕರು ಪರಿಶೀಲನಾ ಪ್ರಕ್ರಿಯೆಗೆ ಒಳಗಾದರು, ಈ ಮೂಲಕ ಅವರು ಅಗತ್ಯವಾದ ದಾಖಲೆಗಳನ್ನು ಪಡೆಯುವಂತೆ ಮಾಡಿದರು. ಪೊಲೀಸರು ಅವರಿಗೆ ಆಧಾರ್ ಕಾರ್ಡ್ ಪಡೆಯಲು ಸಹಾಯ ಮಾಡಿದರು, ನಂತರ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದರು. ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ನಂತರ, ಭಿಕ್ಷುಕರಿಗೆ ಪೊಲೀಸ್ ಠಾಣೆಗಳಲ್ಲಿ ಕೆಲಸ ನೀಡಲಾಯಿತು.
ಇತ್ತೀಚೆಗೆ, ಅವರಲ್ಲಿ 16 ಮಂದಿ ಹೊಸದಾಗಿ ತೆರೆದ ಬ್ಯಾಂಕ್ ಖಾತೆಗಳಲ್ಲಿ ತಮ್ಮ ಮೊದಲ ಸಂಬಳವಾಗಿ ಅಂದಾಜು 10,000 ರೂ. ಪಡೆದುಕೊಂಡಿದ್ದಾರೆ, ಅವರಲ್ಲಿ ಕೆಲವರು ತಮ್ಮ ಮನೆಗಳಿಗೆ ಹಣವನ್ನು ಕಳುಹಿಸಿದರೆ, ಕೆಲವರು ತಮ್ಮ ಸಾಮಾಜಿಕ ಕಾರ್ಯದ ಭಾಗವಾಗಿ ವೇತನದ ಒಂದು ಭಾಗವನ್ನು ದಾನ ಮಾಡಿದರು. ಪೊಲೀಸರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಭಿಕ್ಷುಕರನ್ನು ಸೇರಿಸುತ್ತಿದ್ದಾರೆ ಇದರಿಂದ ಅವರು ತಮ್ಮ ಜೀವನವನ್ನು ಘನತೆಯಿಂದ ಬದುಕಲು ಸಾಧ್ಯವಾಗಲಿದೆ. ಈವರೆಗೆ 24 ಭಿಕ್ಷುಕರಿಗೆ ಉಪಕ್ರಮದ ಭಾಗವಾಗಿ ಉದ್ಯೋಗ ಸಿಕ್ಕಿದೆ.
Until now u may have heard stories of Police’s high handed behaviour with beggars in every city but Shri Sanjay Gunjyal- @uttarakhandcops police Incharge of MahaKumbh, did something remarkable- gave jobs n training to 24, sent back those who wanted to go back to their families. pic.twitter.com/lZbXvrq2nR
— Alok Bhatt (@alok_bhatt) March 28, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.