ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನ ಯೋಜನೆಗೆ ಗಗನಯಾತ್ರಿಗಳಾಗಿ ಆಯ್ಕೆಯಾದ ನಾಲ್ಕು ಭಾರತೀಯ ಅಧಿಕಾರಿಗಳು, ರಷ್ಯಾದ ಮಾಸ್ಕೋದಲ್ಲಿರುವ ಜ್ವಿಯೊಜ್ಡ್ನಿ ಗೊರೊಡೋಕ್ ನಗರದಲ್ಲಿ ತಮ್ಮ ಒಂದು ವರ್ಷದ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ.
ಗಗನಯಾನ ಮಿಷನ್ ಗಗನಯಾತ್ರಿಗಳನ್ನು ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಹೊಂದಿದೆ.
“ಸಂಜೆ ನಾವು ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿದ ಭಾರತೀಯ ಗಗನಯಾತ್ರಿಗಳನ್ನು ಭೇಟಿಯಾದೆವು. ಭವಿಷ್ಯದ ದ್ವಿಪಕ್ಷೀಯ ಬಾಹ್ಯಾಕಾಶ ಯೋಜನೆಗಳ ಬಗ್ಗೆ ನಾವು ಭಾರತೀಯ ರಾಯಭಾರಿಯೊಂದಿಗೆ ಚರ್ಚಿಸಿದ್ದೇವೆ” ಎಂದು ರಷ್ಯಾದ ರಾಜ್ಯ ಬಾಹ್ಯಾಕಾಶ ನಿಗಮದ ಮುಖ್ಯಸ್ಥ ಡಿಮಿಟ್ರಿ ರೋಗೊಜಿನ್ ಹೇಳಿದ್ದಾರೆ.
ಭಾರತೀಯ ಅಧಿಕಾರಿಗಳ ತರಬೇತಿಗಾಗಿ ಒಪ್ಪಂದವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಷ್ಯಾದ ಉಡಾವಣಾ ಸೇವಾ ಪೂರೈಕೆದಾರ ಗ್ಲಾವ್ಕೋಸ್ಮೋಸ್ ನಡುವೆ ಜೂನ್ 2019 ರಲ್ಲಿ ಸಹಿ ಹಾಕಲಾಯಿತು. ಗಗನಯಾತ್ರಿಗಳ ತಂಡ ಭಾರತೀಯ ವಾಯುಪಡೆಯ ನಾಲ್ಕು ಪೈಲಟ್ಗಳು ಗ್ರೂಪ್ ಕ್ಯಾಪ್ಟನ್ ಮತ್ತು ಮೂವರು ವಿಂಗ್ ಕಮಾಂಡರ್ಗಳನ್ನು ಒಳಗೊಂಡಿದೆ.
ತರಬೇತಿ ಫೆಬ್ರವರಿ 10, 2020 ರಂದು ಪ್ರಾರಂಭವಾಗಿದೆ, ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಇದಕ್ಕೆ ತಾತ್ಕಾಲಿಕವಾಗಿ ಅಡಚಣೆಯಾಗಿ ವಿಳಂಬವಾಗಿತ್ತು.
ಭಾರತವು ತನ್ನ 75ನೇ ಸ್ವಾತಂತ್ರ್ಯ ಉತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಗಗನಯಾನ ಯೋಜನೆಯನ್ನು ಆರಂಭಿಸಲು ಭಾರತ ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.