ನವದೆಹಲಿ: ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ದೊಡ್ಡ ಉತ್ತೇಜನ ಸಿಕ್ಕಿದ್ದು, ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (ಎಂಎಹೆಚ್ಎಸ್ಆರ್) ಕಾರಿಡಾರ್ನ ಗುಜರಾತ್ ವಿಸ್ತರಣೆಗೆ ಬೇಕಾದ ಶೇಕಡಾ 95ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ರಾಜ್ಯ ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಗುಜರಾತ್ನ ಕಂದಾಯ ಸಚಿವ ಕೌಶಿಕ್ ಪಟೇಲ್, 2020 ರ ಡಿಸೆಂಬರ್ ವೇಳೆಗೆ ಯೋಜನೆಯ ಗುಜರಾತ್ ಭಾಗಕ್ಕೆ ಬೇಕಾದ 73.64 ಲಕ್ಷ ಚದರ ಮೀಟರ್ ಭೂಮಿಯಲ್ಲಿ 69.99 ಲಕ್ಷ ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಎಂಟು ಜಿಲ್ಲೆಗಳಲ್ಲಿ ಪೂರ್ಣಗೊಂಡಿದೆ ಎಂದು ಹೇಳಿದರು.
ರಾಜ್ಯ, ಇನ್ನೂ ಐದು ಶೇಕಡಾವನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ ಎಂದರು.
ನವಸಾರಿ, ಅಹಮದಾಬಾದ್, ಆನಂದ್, ಭರೂಚ್, ಸೂರತ್ ಮತ್ತು ವಡೋದರಾದಲ್ಲಿ ಇನ್ನೂ ಜಮೀನು ಸ್ವಾಧೀನ ಪ್ರಗತಿಯಲ್ಲಿದೆ. ವಲ್ಸಾದ್ ಮತ್ತು ಖೇಡಾ ಜಿಲ್ಲೆಗಳಲ್ಲಿ ಭೂಸ್ವಾಧೀನ ಪೂರ್ಣಗೊಂಡಿದೆ ಎಂದು ಪಟೇಲ್ ಹೇಳಿದರು.
ಯೋಜನೆಯ ಭೂಸ್ವಾಧೀನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರೈತರಿಂದ ರಾಜ್ಯ ಸರ್ಕಾರವು ಈವರೆಗೆ ಒಟ್ಟು 1,908 ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಪಟೇಲ್ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದರು.
ಜಪಾನ್ನಿಂದ ಆರ್ಥಿಕ ಮತ್ತು ತಾಂತ್ರಿಕ ನೆರವಿನೊಂದಿಗೆ ಈ ಯೋಜನೆಯನ್ನು ಭಾರತದಲ್ಲಿ ಮುಂದುವರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.