News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಾಂಪ್ರದಾಯಿಕ ಚಾಪೆಗೆ ಮರುಜೀವ ನೀಡುವ ಸೇವಾಕಾರ್ಟ್‌ ಪ್ರಯತ್ನಕ್ಕೆ ಕೈಜೋಡಿಸೋಣ

ಹಿಂದೆ ಮನುಷ್ಯ ತಿನ್ನುವುದರಿಂದ ಹಿಡಿದು ಮಲಗುವವರೆಗಿನ ವಸ್ತುಗಳನ್ನು ನೈಸರ್ಗಿಕವಾಗಿ ತಯಾರಿಸುತ್ತಿದ್ದ. ಪ್ರಕೃತಿ ದತ್ತವಾಗಿ ದೊರೆತ ಕಚ್ಛಾವಸ್ತುಗಳನ್ನು ಬಳಸಿ ತನಗೆ ಬೇಕಾದವುಗಳನ್ನು ತಾನೇ ಮಾಡಿಕೊಳ್ಳುತ್ತಿದ್ದ. ಆದರೆ ಆಧುನಿಕ ಬದುಕಿನಲ್ಲಿ ಎಲ್ಲವೂ ಕೃತಕವಾಗಿ ಹೋಗಿದೆ. ನಾವು ಬಳಸುವ ವಸ್ತುಗಳು ಇಂದು ರಾಸಾಯನಿಕಯುಕ್ತವಾಗಿದ್ದು, ನಿಸರ್ಗ ಮತ್ತು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಉದಾಹರಣೆಗೆ ಹಿಂದೆ ನಾವು ಬಿದಿರಿನ ಚಾಪೆ ಬಳಸುತ್ತಿದ್ದೆವು, ಆದರೆ ಇಂದು ಅದರ ಜಾಗವನ್ನು ಪ್ಲಾಸ್ಟಿಕ್‌ ಚಾಪೆಗಳು ಆಕ್ರಮಿಸಿಕೊಂಡಿವೆ.

ಆದರೆ ಇಂದಿಗೂ ಕೆಲವೊಂದು ಕಡೆಗಳಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಬಿದಿರಿನ ನಾರನ್ನು ಹೆಣೆದು ಚಾಪೆಗಳನ್ನು ತಯಾರಿಸುವವರು ಇದ್ದಾರೆ. ಆದರೆ ಸರಿಯಾದ ಉತ್ತೇಜನ ಸಿಗದೆ, ಬೇಡಿಕೆ ಇಲ್ಲದೆ ಅವರ ಬದುಕು ಬರಡಾಗಿದೆ.

ಖಾನಾಪುರದಿಂದ 25 ಕಿಲೋ ಮೀಟರ್ ದೂರದಲ್ಲಿರುವ ವರಕಡ ಎಂಬ ಊರಿನಲ್ಲಿ ಅನೇಕ ಕುಟುಂಬಗಳು ಚಾಪೆಯನ್ನು ಹೆಣೆಯುವ ಕಾಯಕವನ್ನು ನಡೆಸುತ್ತಿವೆ, ಇದು ಆ ಕುಟುಂಬಗಳ ಜೀವನೋಪಾಯವೂ ಹೌದು. ಆದರೆ ಇವುಗಳಿಗೆ ಬೇಡಿಕೆ ಇಲ್ಲದೆ ಈ ಕುಟುಂಬಗಳು ಕಂಗಾಲಾಗಿವೆ.

ಇವರುಗಳು ತಯಾರಿಸುವ ಚಾಪೆಗಳು ಉತ್ತಮ ಗುಣಮಟ್ಟದವುಗಳಾಗಿವೆ. ಮಾತ್ರವಲ್ಲ ಆರೋಗ್ಯಪೂರ್ಣವೂ ಆಗಿದೆ. ನೈಸರ್ಗಿಕ ಕಚ್ಛಾವಸ್ತುಗಳನ್ನೇ ಬಳಸಿ ಇದನ್ನು ತಯಾರಿಸಲಾಗುತ್ತಿದೆ. ಬೇಡಿಕೆ ಇಲ್ಲದೆ ಕಂಗೆಟ್ಟ ಈ ಚಾಪೆ ತಯಾರಕರ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದೆ ಸೇವಾಕಾರ್ಟ್. ಈ ಚಾಪೆಗಳನ್ನು ಖರೀದಿಸಲು ಇಚ್ಛಿಸುವವರಿಗೆ ಅವುಗಳನ್ನು ಅಡ್ವಾನ್ಡ್ ಬುಕ್ ಮಾಡುವ ವ್ಯವಸ್ಥೆಯನ್ನು ರೂಪಿಸಿದೆ. ಸೇವಾಕಾರ್ಟ್ ಲಿಂಕ್ ಮೂಲಕ ಚಾಪೆಗಳನ್ನು ಖರೀದಿಸಬಹುದಾಗಿದೆ. ಪಾರ್ಸೆಲ್‌ ಶುಲ್ಕ ಸೇರಿದಂತೆ ಚಾಪೆ ದರ  300 ರೂಪಾಯಿ ಆಗಿದೆ.

ಆತ್ಮನಿರ್ಭರ ಭಾರತದ ಕನಸನ್ನು ಸಾಕಾರಗೊಳಿಸಲು ʼಸ್ಥಳೀಯತೆಗೆ ಧ್ವನಿಯಾಗೋಣʼ ಎಂಬ ಕರೆಗೆ ನಾವಿಂದು ಹೆಚ್ಚು ಮಹತ್ವವನ್ನು ನೀಡಬೇಕಾಗಿದೆ. ನಮ್ಮ ಸ್ಥಳಿಯ ವಸ್ತುಗಳಿಗೆ ಹೆಚ್ಚು ಹೆಚ್ಚು ಪ್ರಚಾರ ನೀಡಬೇಕಾಗಿದೆ. ಅವುಗಳನ್ನು ಖರೀದಿಸಬೇಕಾಗಿದೆ. ಜಾಗತಿಕ ಮಟ್ಟಕ್ಕೆ ಅವುಗಳನ್ನು ಕೊಂಡೊಯ್ಯಬೇಕಾಗಿದೆ. ಹೀಗಾದಾಗ ಮಾತ್ರ ನಾವು ನಮ್ಮ ಸ್ಥಳಿಯ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದು, ಸ್ವಾವಲಂಬಿ ರಾಷ್ಟ್ರದ ನಿರ್ಮಾಣ ಮಾಡಬಹುದು.  ಸ್ಥಳಿಯ ಉತ್ಪಾದಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೇವಾಕಾರ್ಟ್‌ ಮಾಡುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ.

ಈ ಚಾಪೆಗಳನ್ನು ಖರೀದಿ ಮಾಡಲು ಇಚ್ಛಿಸುವವರು ಸೇವಾಕಾರ್ಟ್‌ನ ಈ ಲಿಂಕ್‌ ಬಳಸಿ ಖರೀದಿಗೆ ಅಡ್ವಾನ್ಸ್‌ ಬುಕ್ಕಿಂಗ್ ಮಾಡಬಹುದಾಗಿದೆ.

https://sevakart.in/home-decor/505-handmade-traditional-chatai-mat.html

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top