ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ನಡೆಯುವ, ತುಳುನಾಡಿನ ಅತ್ಯಂತ ದೊಡ್ಡ ಕಂಬಳ ಕೂಟವೆಂದೇ ಪ್ರಸಿದ್ಧಿ ಪಡೆದಿರುವ ‘ಕೋಟಿ – ಚೆನ್ನಯ’ ಜೋಡುಕರೆ ಕಂಬಳ ಇಂದು ಸಂಪನ್ನಗೊಂಡಿದೆ.
ಮಾರ್ಚ್ 13 ರಂದು ಆರಂಭವಾಗಿದ್ದ ಈ ಕಂಬಳ ಕೂಟ ಮಾರ್ಚ್ 14 ರಂದು ಸಂಪನ್ನಗೊಂಡಿದೆ. ಈ ಕಂಬಳದಲ್ಲಿ ಒಟ್ಟು 155 ಜೊತೆ ಕಂಬಳದ ಕೋಣಗಳು ಭಾಗವಹಿಸಿದ್ದು, ಅಡ್ಡ ಹಲಗೆಯಲ್ಲಿ 6 ಜೋಡಿ ಕೋಣಗಳು, ಹಗ್ಗ ಹಿರಿಯ ವಿಭಾಗದಲ್ಲಿ 12 ಜೊತೆ ಕೋಣಗಳು, ನೇಗಿಲು ಹಿರಿಯ ವಿಭಾಗದಲ್ಲಿ 26 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 17 ಜೊತೆ ಕೋಣಗಳು ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ 86 ಜೊತೆ ಕೋಣಗಳು ಭಾಗವಹಿಸಿದ್ದವು.
ಕಂಬಳದ ವಿಜೇತರ ಫಲಿತಾಂಶ:
ಕನೆ ಹಲಗೆ:
ಬಾರ್ಕೂರು ಶಾಂತರಾಮ ಶೆಟ್ಟಿ ಬಿ
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಅಡ್ಡ ಹಲಗೆ:
ಪ್ರಥಮ: ಮೇರಮಜಲ್ ಮಿಶನ್ ಗಾಡ್ವಿನ್ ವೆಲ್ವಿನ್ ವಾಸ್
ಹಲಗೆ ಮುಟ್ಟಿದವರು: ಬೈಂದೂರು ಹೊಸಮನೆ ಮಹೇಶ್ ಪೂಜಾರಿ
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್
ಹಗ್ಗ ಹಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯದ ಶಕ್ತಿ ಪ್ರಸಾದ್ ಶೆಟ್ಟಿ ‘ಬಿ’
ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ
ದ್ವಿತೀಯ: ನಂದಳಿಕೆ ನವ್ಯತ-ನಮೃತ ಶ್ರೀಕಾಂತ್ ಭಟ್ ‘ಬಿ’
ಓಡಿಸಿದವರು: ಗುರುಚರಣ್ ಪಟ್ಟೆ
ಹಗ್ಗ ಕಿರಿಯ
ಪ್ರಥಮ: ಮೂಡಬಿದ್ರೆ ನ್ಯೂ ಪಡಿವಾಳ್ಸ್ ಹಾರ್ದಿಕ್ ಹರ್ಷವರ್ಧನ್ ಪಡಿವಾಳ ‘ಎ’
ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ
ದ್ವಿತೀಯ: ಸಿದ್ಧಕಟ್ಟೆ ಹೊಂಗಾರಹಿತ್ಲು ಮೋಕ್ಷಿತ್ ಕಾಂತಣ್ಣ ಶೆಟ್ಟಿ
ಓಡಿಸಿದವರು: ನಕ್ರೆ ಮಂಜುನಾಥ್ ಭಂಡಾರಿ
ನೇಗಿಲು ಹಿರಿಯ
ಪ್ರಥಮ: ಬೋಳದಗುತ್ತು ಜಗದೀಶ್ ಶೆಟ್ಟಿ ‘ಎ’
ಓಡಿಸಿದವರು: ಮರೋಡಿ ಶ್ರೀಧರ್
ದ್ವಿತೀಯ: ಇರುವೈಲು ಪಾನಿಲ ಬಾಡ ಪೂಜಾರಿ ‘ಬಿ’
ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ
ನೇಗಿಲು ಕಿರಿಯ:
ಪ್ರಥಮ: ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿತ್ ಕುಮಾರ್
ಓಡಿಸಿದವರು: ಮರೋಡಿ ಶ್ರೀಧರ
ದ್ವಿತೀಯ: ಅಳಿಯೂರು ಮಿತ್ತೊಟ್ಟು ಸೀತಾರಾಮ ಆನಂದ ಶೆಟ್ಟಿ
ಓಡಿಸಿದವರು: ಮಾಂಟ್ರಾಡಿ ರಾಜೇಶ್ ಆಚಾರ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.