ಹಂಪಿ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪಿ ಕಮಲ ಮಹಲ್ ಸ್ಮಾರಕ ಸುತ್ತಲಿನ ಕಲ್ಲಿನ ಕೋಟೆ ಗೋಡೆಯ ಒಂದು ಭಾಗ ಶುಕ್ರವಾರ ಬೆಳಗ್ಗೆ ಕುಸಿದು ಬಿದ್ದಿದೆ. ಪುರಾತನ ಗೋಡೆಯಾಗಿರುವುದರಿಂದ ಕುಸಿದು ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಸಂದರ್ಭ ಅಲ್ಲಿ ಯಾರು ಇರದ ಕಾರಣ ಯಾವುದೇ ಜೀವಪಾಯಗಳು ಸಂಭವಿಸಿಲ್ಲ.
ಕೋಟೆಯ ಒಳಭಾಗದಲ್ಲಿ ಇದ್ದ ಅಮೂಲ್ಯ ಸೊತ್ತುಗಳಿಗೆ ಹಾನಿ ಸಂಭವಿಸಿಲ್ಲ. ಒಂದು ವೇಳೆ ಕೋಟೆಯ ಒಳಭಾಗದಲ್ಲಿದ್ದ ಪುರಾತನ ಕಾಲುವೆಗೆ ಹಾನಿ ಉಂಟಾಗುವ ಹೆಚ್ಚಿನ ಸಾಧ್ಯತೆಗಳು ಇದ್ದವು. ಪ್ರಸ್ತುತ ಹಾನಿಗೊಂಡು ನಿಂತಿರುವ ಕೋಟೆಯ ಭಾಗ ಇದೇ ರೀತಿ ಇರಬಹುದು ಎಂದು ಹೇಳಲೂ ಸಾಧ್ಯವಿಲ್ಲ. ಯಾವಾಗ ಬೇಕಾದರು ಈ ಕೋಟೆಯ ಮತ್ತಷ್ಟು ಭಾಗಗಳು ಧರೆಗುರುಳಬಹುದು.
ಈ ಕೋಟೆಯು 15 ನೇ ಶತಮಾನದ ಕೋಟೆಯಾಗಿರುವುದರಿಂದ ಮತ್ತು ಸರಿಯಾದ ನಿರ್ವಹಣೆಗಳು ಇಲ್ಲದೆ ಶಿಥಿಲಗೊಂಡಿದೆ ಎನ್ನುವುದು ಒಂದು ವಾದವಾದರೆ, ಆಸುಪಾಸು ಕಲ್ಲು ಗಣಿಗಾರಿಕೆಗಳ ಸ್ಫೋಟದ ಪರಿಣಾಮ ಈ ಕೋಟೆಗೆ ಹಾನಿಯಾಗಿದೆ ಎನ್ನುವುದು ಸ್ಥಳೀಯರ ವಾದವಾಗಿದೆ.
ವಿಜಯನಗರ ಸಾಮ್ರಾಜ್ಯದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಈ ಕೋಟೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕೆನ್ನುವ ಆಗ್ರಹಗಳು ಕೇಳಿ ಬರುತ್ತಿದೆ.
ಈ ಘಟನೆಯ ಬಗ್ಗೆ ಕೇಂದ್ರ ಕಚೇರಿಗೆ ಸಂಪೂರ್ಣ ಮಾಹಿತಿ ನೀಡಿದ್ದು. ಹಾನಿಗೀಡಾದ ಈ ಕೋಟೆಯ ಭಾಗದ ಮರುನಿರ್ಮಾಣಕ್ಕೆ ಒಪ್ಪಿಗೆ ಪಡೆಯಲಾಗುವುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Wall said to be constructed in 15th century near the historic #LotusMahal in #Hampi in #VijayanagaraDistrict caves in. @XpressBengaluru @santwana99 @ramupatil_TNIE @Amitsen_TNIE pic.twitter.com/ntHMrlfkap
— Subhash Chandra NS (@ns_subhash) March 12, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.