ಬೆಂಗಳೂರು: ರಾಜ್ಯದ ಯಾವುದೇ ಸಂಸ್ಥೆಗಳು ಗರ್ಭಿಣಿಯರನ್ನು ಯಾವ ಕಾರಣಕ್ಕೂ ಕೆಲಸದಿಂದ ವಜಾ ಮಾಡುವಂತಿಲ್ಲ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಈ ವಿಷಯದ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಗರ್ಭಿಣಿಯರನ್ನು ಕೆಲಸದಿಂದ ವಜಾ ಮಾಡುವುದು ಶಿಕ್ಷಾರ್ಹ. ಇದಕ್ಕೆ ದಂಡದ ಜೊತೆಗೆ ಮೂರು ತಿಂಗಳ ಜೈಲು ವಾಸ ಅನುಭವಿಸಬೇಕಾಗುವುದು ಎಂದು ಹೇಳಿದ್ದಾರೆ. ಮಹಿಳಾ ಮಾಸ, ಯಾವುದು ಸರಿ ಎಂಬುದನ್ನು ತಿಳಿದುಕೊಳ್ಳಿ ಎಂಬುದಾಗಿಯೂ ಕಿವಿಮಾತು ಹೇಳಿದ್ದಾರೆ.
ಗರ್ಭಿಣಿಯರನ್ನು ಯಾವುದೇ ಉದ್ಯೋಗದಾತರು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾ ಮಾಡುವಂತಿಲ್ಲ. ಗರ್ಭಿಣಿಯರನ್ನು ಕೆಲಸದಿಂದ ವಜಾ ಮಾಡುವುದು ಶಿಕ್ಷಾರ್ಹವಾಗಿದ್ದು, ದಂಡದೊಂದಿಗೆ 3 ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. #ಮಹಿಳಾಮಾಸ #ಯಾವುದುಸರಿಎಂದುತಿಳಿದುಕೊಳ್ಳಿ #ಹಕ್ಕು 2 pic.twitter.com/4WHMqIeqIS
— Dr Sudhakar K (@mla_sudhakar) March 10, 2021
ಉದ್ಯಮಿಗಳು ಗರ್ಭಿಣಿಯರು ಎಂಬ ಕಾರಣದ ಜೊತೆಗೆ, ಇನ್ಯಾವುದೇ ಕಾರಣಗಳನ್ನು ನೀಡಿ ಮಹಿಳೆಯರನ್ನು ಕೆಲಸದಿಂದ ವಜಾ ಮಾಡುವಂತಿಲ್ಲ. ಅಂತಹ ವ್ಯವಸ್ಥೆ ಗಮನಕ್ಕೆ ಬಂದಲ್ಲಿ ಶಿಕ್ಷೆ ಮತ್ತು ದಂಡ ವಿಧಿಸುವ ಎಚ್ಚರಿಕೆಯನ್ನು ಸಚಿವರು ರವಾನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.