ನವದೆಹಲಿ: ಹಿಂದೂ ಸಂಘಟಕರ ಪ್ರಮುಖರನ್ನು ಗುರಿಯಾಗಿಸಿಕೊಂಡು ಮದ್ದು ಗುಂಡುಗಳನ್ನ ಸಂಗ್ರಹಿಸುತ್ತಿದ್ದ ಲಷ್ಕರ್ -ಎ-ತೈಬಾ ಭಯೋತ್ಪಾದಕರ ವಿರುದ್ಧ ದೋಷಾರೋಪ ಪಟ್ಟಿಯನ್ನು ಎನ್ಐಎ ದಾಖಲಿಸಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಸಲ್ಲಿಸಲಾಗಿದೆ.
ಈ ವ್ಯಕ್ತಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಹರ್ಕತ್-ಉಲ್-ಜೆಹಾದ್-ಇ-ಇಸ್ಲಾಮಿ (ಹುಜಿ) ಗೆ ಸೇರಿದವರು ಎಂದು ಎನ್ಐಎ ತಿಳಿಸಿದೆ.
ಈ ಪ್ರಕರಣದಲ್ಲಿ ಬಂಧಿತರಾದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬಾತ ಬೆಂಗಳೂರಿನಲ್ಲಿ ನೆಲೆಸಿದ ಡಾ. ಸಬೀಲ್ ಅಹ್ಮದ್ (ಮೋಟು ಡಾಕ್ಟರ್) ಮತ್ತೊಬ್ಬ ಹೈದರಾಬಾದ್ನಲ್ಲಿ ನೆಲೆಸಿದ ಅಸಾದುಲ್ಲಾ ಖಾನ್. ಈ ಉಗ್ರರ ಮೇಲೆ ಚಾರ್ಜ್ಶೀಟ್ ಹೊರಡಿಸಿದೆ. ಈ ಹಿಂದೆ ಎನ್ಐಎ ಇದೇ ಪ್ರಕರಣದಲ್ಲಿ 17 ಮಂದಿಗೆ ಚಾರ್ಜ್ಶೀಟ್ ನೀಡಿತ್ತು. 2016 ರಲ್ಲಿ 13 ಆರೋಪಿಗಳು ಶಿಕ್ಷೆಗೊಳಗಾದರು.
ಈ ಉಗ್ರರು ಭಾರತದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ಮಾಡಲು ಮತ್ತು ಭಾರತ ಸರ್ಕಾರದ ವಿರುದ್ಧ ಹೋರಾಡಲು ಸಿದ್ಧತೆಗಳನ್ನು ಮಾಡಿದ್ದರು.
ಬೆಂಗಳೂರಿನಲ್ಲಿನ ಹಿಂದೂ ಸಮುದಾಯದ ಪ್ರಮುಖ ವ್ಯಕ್ತಿಗಳನ್ನು ಮತ್ತು ಕರ್ನಾಟಕದ ಹುಬ್ಬಳ್ಳಿಯಲ್ಲಿನ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ಅವರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದರು ಮತ್ತು ಮಹಾರಾಷ್ಟ್ರದಲ್ಲಿ ನಾಂದೇಡ್, ತೆಲಂಗಾಣದ ಹೈದರಾಬಾದ್ ಗಳಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಇವರು ಪ್ರಯತ್ನಿಸುತ್ತಿದ್ದರು ಎಂದು ಎಎನ್ಐ ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.