ನವದೆಹಲಿ: ಪುದುಚೇರಿಯಲ್ಲಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಿದ್ದಾರೆ. ಆದರೆ ವಿಶ್ವಾಸ ಮತ ಗೆಲ್ಲುವಲ್ಲಿ ಅವರು ವಿಫಲರಾಗಿದ್ದಾರೆ. ಹೀಗಾಗಿ ಪುದುಚೇರಿಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಪತನಗೊಂಡಿದೆ.
ಇಂದು ಸಂಜೆ 5 ಗಂಟೆಯೊಳಗೆ ಸದನದ ಮಹಡಿಯಲ್ಲಿ ಬಹುಮತವನ್ನು ಸಾಬೀತುಪಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ನಾರಾಯಣಸಾಮಿ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರು.
ಆರು ಶಾಸಕರ ರಾಜೀನಾಮೆ ಮತ್ತು ಒಬ್ಬರ ಅನರ್ಹತೆಯ ನಂತರ, ಪುದುಚೇರಿ ವಿಧಾನಸಭೆಯ ಸಾಮರ್ಥ್ಯ 26ಕ್ಕೆ ಕುಸಿದಿತ್ತು. ಸರ್ಕಾರವು ಕೇವಲ 12 ಶಾಸಕರನ್ನು ಹೊಂದಿದೆ. ಅಂದರೆ ಅರ್ಧಕ್ಕಿಂತಲೂ ಒಂದು ಶಾಸಕರ ಸಂಖ್ಯೆ ಕಡಿಮೆ ಹೊಂದಿತ್ತು. ಇದರಲ್ಲಿ ಕಾಂಗ್ರೆಸ್ ಶಾಸಕರಾದ ಸ್ಪೀಕರ್ ಕೂಡ ಸೇರಿದ್ದಾರೆ ಅವರಿಗೆ ಮತ ಚಲಾಯಿಸಲು ಸಾಧ್ಯವಾಗಿಲ್ಲ.
ಪ್ರತಿಪಕ್ಷದಲ್ಲಿ 14 ಶಾಸಕರು ಇದ್ದಾರೆ. ಎನ್ಆರ್ ಕಾಂಗ್ರೆಸ್ನಿಂದ 7, ಎಐಎಡಿಎಂಕೆ 4, ಮತ್ತು ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡಿದ ಮೂವರು ಶಾಸಕರು ಇದ್ದಾರೆ.
ಹೀಗಾಗಿ ಸುಲಭವಾಗಿಯೇ ಸರ್ಕಾರ ವಿಶ್ವ ಮತಯಾಚನೆಯಲ್ಲಿ ವಿಫಲಗೊಂಡು, ಸರ್ಕಾರದಿಂದ ಕೆಳಕ್ಕಿಳಿಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.