ಬೆಂಗಳೂರು: ಫೆಬ್ರವರಿ ಅಂತ್ಯದ ವೇಳೆಗೆ ಭಾರತೀಯ ಖಾಸಗಿ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಲಾಗುತ್ತಿದೆ. ವಿಶೇಷವೆಂದರೆ ಈ ಉಪಗ್ರಹ ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರ, ಭಗವದ್ಗೀತೆಯ ಪ್ರತಿ ಮತ್ತು 25 ಸಾವಿರ ನಾಗರಿಕರ ಹೆಸರುಗಳನ್ನು ಹೊತ್ತು ನಭಕ್ಕೆ ಚಿಮ್ಮಲಿದೆ.
ಈ ಸತೀಶ್ ಧವನ್ ಉಪಗ್ರಹ, ಅಥವಾ ಎಸ್ಡಿ ಎಸ್ಎಟಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹ್ಹಿಕಲ್ (ಪಿಎಸ್ಎಲ್ವಿ)ಯಿಂದ ಉಡಾವಣೆಯಾಗಲಿದೆ.
ವರದಿಯ ಪ್ರಕಾರ, ಈ ಉಪಗ್ರಹಕ್ಕೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಸ್ಥಾಪಕ ಪಿತಾಮಹರಲ್ಲಿ ಒಬ್ಬರಾರ ಸತೀಶ್ ಧವನ್ ಅವರ ಹೆಸರನ್ನು ಇಡಲಾಗಿದೆ ಮತ್ತು ಸ್ಪೇಸ್ಕಿಡ್ಜ್ ಇಂಡಿಯಾ ಇದನ್ನು ಅಭಿವೃದ್ಧಿಪಡಿಸಿದೆ. ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನವನ್ನು ಉತ್ತೇಜಿಸಲು ಮೀಸಲಾಗಿರುವ ಸಂಸ್ಥೆಯು ಮೂರು ವೈಜ್ಞಾನಿಕ ಪೇಲೋಡ್ಗಳನ್ನು ಸಹ ಹೊತ್ತೊಯ್ಯುತ್ತದೆ. ಅದೆಂದರೆ ಒಂದು ಬಾಹ್ಯಾಕಾಶ ವಿಕಿರಣ ಅಧ್ಯಯನ, ಒಂದು ಮ್ಯಾಗ್ನೆಟೋಸ್ಪಿಯರ್ ಅನ್ನು ಅಧ್ಯಯನ ಮಾಡುವುದು, ಮತ್ತು ಇನ್ನೊಂದು ಕಡಿಮೆ-ಶಕ್ತಿಯ ವಿಶಾಲ-ಪ್ರದೇಶ ಸಂವಹನ ಜಾಲವನ್ನು ಪ್ರದರ್ಶಿಸುತ್ತದೆ.
ಭಗವದ್ಗೀತೆಯ ಪ್ರತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಂಸ್ಥೆ ನಿರ್ಧರಿಸಿತು, ಈಗಾಗಲೇ ಇತರ ಅನೇಕ ಬಾಹ್ಯಾಕಾಶ ಯಾನಗಳು ಬೈಬಲ್ನಂತಹ ಪವಿತ್ರ ಪುಸ್ತಕಗಳನ್ನು ಸಾಗಿಸಿವೆ. “ನಾವು ಪ್ರಧಾನಮಂತ್ರಿಯವರ ಹೆಸರು ಮತ್ತು ಛಾಯಾಚಿತ್ರವನ್ನು ಉನ್ನತ ಫಲಕದಲ್ಲಿ ಆತ್ಮನಿರ್ಭರ ಮಿಷನ್ ಪದಗಳೊಂದಿಗೆ ಸೇರಿಸಿದ್ದೇವೆ. ಈ ಉಪಗ್ರಹವನ್ನು ಎಲೆಕ್ಟ್ರಾನಿಕ್ಸ್ ಮತ್ತು ಸರ್ಕ್ಯೂಟ್ರಿ ಸೇರಿದಂತೆ ಭಾರತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ತಯಾರಿಸಲಾಗಿದೆ ”ಎಂದು ಸಂಸ್ಥೆ ಹೇಳಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ. ಕೆ.ಶಿವನ್ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ. ಆರ್.ಉಮಮಹೇಶ್ವರನ್ ಅವರ ಹೆಸರನ್ನು ಕೆಳಗಿನ ಫಲಕದಲ್ಲಿ ಕೆತ್ತಲಾಗಿದೆ.
ಇಸ್ರೋ ಶಿಫಾರಸುಗಳನ್ನು ಅನುಸರಿಸಿ ಕೆಲವು ವಿನ್ಯಾಸ ಬದಲಾವಣೆಗಳನ್ನು ಮಾಡಲಾಗುತ್ತಿರುವುದರಿಂದ ಈ ಖಾಸಗಿ ಉಪಗ್ರಹವನ್ನು ಭಾನುವಾರ ಶ್ರೀಹರಿಕೋಟಕ್ಕೆ ಸಾಗಿಸಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.