ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೋವಿಡ್ -19 ಮುಕ್ತವಾದ ದೇಶದ ಮೊದಲ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವಾಗಿ ಹೊರಹೊಮ್ಮಿದೆ. ಸಕ್ರಿಯ ಪ್ರಕರಣಗಳು ಈ ದ್ವೀಪಗಳಲ್ಲಿ ಶೂನ್ಯಕ್ಕೆ ಇಳಿದಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇದ್ದ ಕೊನೆಯ ನಾಲ್ಕು ಸೋಂಕಿತ ವ್ಯಕ್ತಿಗಳನ್ನು ಗುಣಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ವೆಬ್ಸೈಟ್ ವರದಿ ಮಾಡಿದೆ. ಈ ಕೇಂದ್ರಾಡಳಿ ಪ್ರದೇಶ ಒಟ್ಟು 4,932 ಪ್ರಕರಣಗಳು ಮತ್ತು ವೈರಸ್ ನಿಂದಾಗಿ 62 ಸಾವುಗಳನ್ನು ವರದಿ ಮಾಡಿದೆ.
ಈ ನಡುವೆ, ಭಾರತದ ದೈನಂದಿನ ಪ್ರಕರಣಗಳಲ್ಲಿ ಕೇರಳದ ಪಾಲು ನಿನ್ನೆ ಮೊದಲ ಬಾರಿಗೆ 50 ಪ್ರತಿಶತವನ್ನು ದಾಟಿದೆ. ದೇಶದಲ್ಲಿ ಹೊಸದಾಗಿ 11,024 ಪ್ರಕರಣಗಳು ದಾಖಲಾಗಿದ್ದು, ಕೇರಳದಲ್ಲಿ ಒಟ್ಟು 5,716 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಸುಮಾರು 1 ಲಕ್ಷ 61 ಸಾವಿರ ಸಕ್ರಿಯ ಪ್ರಕರಣಗಳಲ್ಲಿ ರಾಜ್ಯವು ಅತಿ ಹೆಚ್ಚು ಅಂದರೆ 69,157 ಪ್ರಕರಣ ಹೊಂದಿದೆ.
ಮಹಾರಾಷ್ಟ್ರವೂ ಅತಿ ಹೆಚ್ಚು ಸಾವುಗಳನ್ನು ವರದಿ ಮಾಡಿದೆ, ನಿನ್ನೆ 30 ಮಂದಿ ಅಲ್ಲಿ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 1,927 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಎಂಟು ದಿನಗಳಲ್ಲಿ ದಾಖಲಾದ ಅತಿ ಕಡಿಮೆ ಪ್ರಕರಣ ಆಗಿದೆ. ಸತತ ಎರಡನೇ ದಿನ ಮುಂಬೈ 400 ಕ್ಕಿಂತ ಕಡಿಮೆ ಪ್ರಕರಣಗಳನ್ನು ವರದಿ ಮಾಡಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 41,586 ಕ್ಕೆ ಇಳಿದಿದ್ದು, ಅದರಲ್ಲಿ 5,530 ಪ್ರಕರಣಗಳು ಮುಂಬೈನಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.