ನವದೆಹಲಿ: ಕೋವಿಡ್-19ನಂತಹ ಕಠಿಣ ಕಾಲದಲ್ಲಿ ಅಪ್ರತಿಮ ಸಾಧನೆಯನ್ನು ತೋರಿಸಿದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ್ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತರು ಪ್ರದರ್ಶಿಸಿದ ಅಸಾಧಾರಣ ಪ್ರತಿಭೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಇಂದು ಯುವ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಹನ ನಡೆಸಿದ ಪ್ರಧಾನಿ, ಸರಿಯಾದ ಚಿಂತನೆಯೊಂದಿಗೆ ಬೆಸೆದಾಗ ಸಣ್ಣ ವಿಚಾರಗಳಿಂದ ಎಷ್ಟು ದೊಡ್ಡ ಮತ್ತು ಪರಿಣಾಮಕಾರಿ ಫಲಿತಾಂಶಗಳು ಬರಬಹುದು ಎಂಬುದಕ್ಕೆ ಈ ಪ್ರಶಸ್ತಿ ಒಂದು ಉದಾಹರಣೆಯಾಗಿದೆ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತ ಮಕ್ಕಳ ಯಶಸ್ಸು ಅನೇಕ ಜನರಿಗೆ ಸ್ಫೂರ್ತಿ ನೀಡಿದೆ ಎಂದು ಮೋದಿ ಪ್ರತಿಪಾದಿಸಿದರು.
ಬಾಲ್ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತರನ್ನು ಇಂದು ನೋಡುತ್ತಿರುವ ಮತ್ತು ಅವರ ಮಾತನ್ನು ಆಲಿಸುತ್ತಿರುವ ದೇಶದ ಇತರ ಮಕ್ಕಳು ಕೂಡ ಅವರ ಯಶಸ್ಸಿನ ಕಥೆಗಳಿಂದ ಪ್ರೇರಿತರಾಗುತ್ತಾರೆ ಎಂದು ಮೋದಿ ಹೇಳಿದ್ದಾರೆ.
ನೀವು ದೇಶಕ್ಕಾಗಿ ಕೆಲಸ ಮಾಡುವಾಗ ನಿಮ್ಮ ಆಕರ್ಷಣೆಯ ಪ್ರಮಾಣವು ಗಾತ್ರದಲ್ಲಿ ಹೆಚ್ಚಾಗುತ್ತದೆ ಎಂದು ಪ್ರಧಾನಿ ಹೇಳಿದರು. ಇದು ಆಲೋಚನಾ ವಿಧಾನವನ್ನೂ ಬದಲಾಯಿಸುತ್ತದೆ. ಸಾಧನೆಗಳು ನಮ್ರತೆಯೊಂದಿಗೆ ಬರಬೇಕು ಮತ್ತು ವಿಜೇತರು ತಮ್ಮ ಸಾಧನೆಗಳ ಬಗ್ಗೆ ಎಂದಿಗೂ ತೃಪ್ತರಾಗಬಾರದು, ಇನ್ನಷ್ಟು ಸಾಧನೆಯನ್ನು ಮಾಡುವತ್ತ ನೋಡಬೇಕು ಎಂದು ಮೋದಿ ಹೇಳಿದರು.
ನಾವೀನ್ಯತೆ, ಪಾಂಡಿತ್ಯಶಾಸ್ತ್ರ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಾಮಾಜಿಕ ಸೇವೆ ಮತ್ತು ಸಾಃಸದ ವಿವಿಧ ಕ್ಷೇತ್ರಗಳಲ್ಲಿ ಈ ವರ್ಷ 32 ಮಕ್ಕಳಿಗೆ ಅಸಾಧಾರಣ ಸಾಮರ್ಥ್ಯಗಳು ಮತ್ತು ಅತ್ಯುತ್ತಮ ಸಾಧನೆಗಳಿಗಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ್ ಪುರಸ್ಕರ್ 2021 ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಪಡೆದ ಮಕ್ಕಳು 21 ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳ 32 ಜಿಲ್ಲೆಗಳವರು. ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಏಳು ಪ್ರಶಸ್ತಿಗಳು, ನಾವೀನ್ಯತೆಗಾಗಿ ಒಂಬತ್ತು ಮತ್ತು ಪಾಂಡಿತ್ಯಪೂರ್ಣ ಸಾಧನೆಗಳಿಗಾಗಿ ಐದು ಪ್ರಶಸ್ತಿಗಳನ್ನು ನೀಡಲಾಗಿದೆ. ಕ್ರೀಡಾ ವಿಭಾಗದಲ್ಲಿ ಏಳು ಮಕ್ಕಳು, ಸಾಹಸದಲ್ಲಿ ಮೂರು ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳಿಗಾಗಿ ಒರ್ವನಿಗೆ ಗೌರವ ತೋರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.