ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದ ಕಾಂಗ್ರೆಸ್ ಇಂದು ರಾಜಭವನ್ ಚಲೋ ಪ್ರತಿಭಟನೆ ಹಮ್ಮಿಕೊಂಡಿದೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರದ ಕೃಷಿ ಕಾಯ್ದೆಯನ್ನು ಸಮರ್ಥಿಸಿ ಟ್ವೀಟ್ ಮಾಡಿದ್ದಾರೆ.
ಮೋದಿ ವಿತ್ ಫಾರ್ಮರ್ಸ್ ಎಂಬ ಹ್ಯಾಷ್ ಟ್ಯಾಗ್ ಬಳಸಿ ಕಟೀಲ್ ಸರಣಿ ಟ್ವೀಟ್ ಮಾಡಿದ್ದಾರೆ. ತನ್ನದೇ ಉತ್ಪನ್ನಗಳನ್ನು ರೈತ ಮಂಡಿಗೆ ಹಾಕಿದ ಮೇಲೆ, ಬೇಕೆಂದಾಗ ಹಿಂತೆಗೆದುಕೊಳ್ಳಲು ಮತ್ತೆ ಪರವಾನಗಿಯನ್ನು ಪಡೆಯಲೇಬೇಕು ಎಂಬ ಎಪಿಎಂಸಿಯ ವ್ಯವಸ್ಥೆಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರ, ರೈತನು ತನ್ನಿಚ್ಛೆ ಬಂದ ಕಡೆಯಲ್ಲಿ ಮಾರುವ ವ್ಯವಸ್ಥೆಯನ್ನು ಪ್ರಸ್ತುತಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ. ರೈತನ ಮೇಲಿನ ದೌರ್ಜನ್ಯ ತಡೆಯಲು 1963 ರಲ್ಲಿ ಎಪಿಎಂಸಿ ಕಾಯ್ದೆಯನ್ನು ತರಲಾಯಿತು. ಗ್ರಾಹಕನಾಗಲಿ ಅಥವಾ ರೈತನಾಗಲಿ ಈ ಮಾರುಕಟ್ಟೆಯ ಮೂಲಕವೇ ಮಾರಾಟ ಅಥವಾ ಖರೀದಿಯನ್ನು ಮಾಡಬೇಕು ಎಂದು ಈ ನೀತಿ ಹೇಳುತ್ತಿತ್ತು. ಆದರೆ, ಹೊಸ ಕಾಯ್ದೆ ರೈತನಿಗೆ ಮುಕ್ತ ಮಾರುಕಟ್ಟೆಯ ಸ್ವಾತಂತ್ರ್ಯವನ್ನು ಒದಗಿಸುತ್ತದೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಹಾಗೆಯೇ, ರೈತನು ಬೇರೆ ತಾಲ್ಲೂಕಿನ ಎಪಿಎಂಸಿಗಳಲ್ಲಿ ಉತ್ಪನ್ನಗಳಿಗೆ ಬೆಲೆ ಹೆಚ್ಚಿದ್ದರೂ ಸಹ ಮಾರಲು ನಿಷೇಧವಿತ್ತು. ಈ ವ್ಯವಸ್ಥೆಯನ್ನು ಕೇಂದ್ರ ಸರಕಾರ ನಿಷೇಧಿಸಿದ್ದು, ರೈತ ತಾನು ಇಚ್ಛೆ ಪಟ್ಟ ಮಂಡಿ ಅಥವಾ ಉಳಿದ ಸ್ಥಳಗಳಲ್ಲೂ ಉತ್ಪನ್ನಗಳ ವ್ಯವಹಾರ ಮಾಡಬಹುದಾಗಿದೆ ಎಂದು ನಳಿನ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ತಂದಿರುವ ಈ ನೂತನ ಕಾಯ್ದೆಗಳು ರೈತನ ಪರವಾಗಿವೆ. ಇದರಿಂದಾಗಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರೈತನ ಮೇಲಿನ ಈ ದೌರ್ಜನ್ಯ ತಡೆಯಲು 1963 ರಲ್ಲಿ ಎಪಿಎಂಸಿ ಕಾಯ್ದೆಯನ್ನು ತರಲಾಯಿತು. ಗ್ರಾಹಕನಾಗಲಿ ಅಥವಾ ರೈತನಾಗಲಿ ಈ ಮಾರುಕಟ್ಟೆಯ ಮೂಲಕವೇ ಮಾರಾಟ ಅಥವಾ ಖರೀದಿಯನ್ನು ಮಾಡಬೇಕು. ಆದರೆ, ಹೊಸ ಕಾಯ್ದೆ ರೈತನಿಗೆ ಮುಕ್ತ ಮಾರುಕಟ್ಟೆಯನ್ನು ಒದಗಿಸುತ್ತದೆ. #ModiWithFarmers
— Nalinkumar Kateel (@nalinkateel) January 20, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.