ಮಡಿಕೇರಿ: ಫೆ. 6 ರಂದು ರಾಜ್ಯಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆಗಮಿಸಲಿದ್ದು, ಮಡಿಕೇರಿಯ ಜಿ ಟಿ ರಸ್ತೆಯಲ್ಲಿರುವ ಮಾಜಿ ಸೇನಾ ಮುಖ್ಯಸ್ಥ ಜನರಲ್ ಕೆ ಎಸ್ ತಿಮ್ಮಯ್ಯ ಅವರ ನವೀಕರಿಸಲಾಗಿರುವ ನಿವಾಸ, ಭಾರತೀಯ ಯೋಧರ ಶೌರ್ಯವನ್ನೊಳಗೊಂಡ ವಸ್ತುಪ್ರದರ್ಶನಾಲಯವಾಗಿರುವ ಸನ್ನಿ ಸೈಡ್ ಅನ್ನು ಉದ್ಘಾಟಿಸಲಿದ್ದಾರೆ.
ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ ಈ ಮ್ಯೂಸಿಯಂ ಅನ್ನು ದೇಶಕ್ಕೆ ಅರ್ಪಿಸಲು ಮತ್ತು ಜನರಲ್ ತಿಮ್ಮಯ್ಯ ಯುದ್ಧ ಸ್ಮಾರಕವನ್ನು ಉದ್ಘಾಟಿಸಲು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ-ಜನರಲ್ ಕೆ ಎಸ್ ತಿಮ್ಮಯ್ಯ ಫೋರಂ ರಾಷ್ಟ್ರಪತಿ ಕೋವಿಂದ್ ಅವರನ್ನು ಆಹ್ವಾನಿಸಿತ್ತು. ಈ ಭೇಟಿಯನ್ನು ರಾಷ್ಟ್ರಪತಿಗಳು ಅಧಿಕೃತಗೊಳಿಸಿದ್ದು, ಈ ವಿಚಾರ ಸಂತಸ ತಂದಿರುವುದಾಗಿ ಕರ್ನಲ್ ಸುಬ್ಬಯ್ಯ ಅವರು ತಿಳಿಸಿದ್ದಾರೆ. ಜನರಲ್ ತಿಮ್ಮಯ್ಯ ಅವರು 1957-61 ರ ವರೆಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಈ ವಸ್ತು ಸಂಗ್ರಹಾಲಯವನ್ನು 6 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ಮಹಾರಾಷ್ಟ್ರದ ಪುಣೆಯ ಖಡ್ಕಿಯಲ್ಲಿನ ಕರ್ಕಿ ಯುದ್ಧ ಸ್ಮಶಾನದಿಂದ ರಸ್ತೆಯ ಮೂಲಕ ಸಾಗಿಸಲ್ಪಟ್ಟ ಆರ್ಮಿ ಟ್ಯಾಂಕ್, ಜನರಲ್ ತಿಮ್ಮಯ್ಯ ಅವರ ಲೇಖನಗಳು, ಮಿಲಿಟರಿ ಸಮವಸ್ತ್ರಗಳು, ಪುಸ್ತಕಗಳು, ಭಾರತೀಯ ಮೂರೂ ಸೇನಾ ಪಡೆಗಳ ಮಾಹಿತಿ, ಶಸ್ತ್ರಾಸ್ತಗಳು ಮೊದಲಾದವುಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.