ಬೆಂಗಳೂರು : ರೋಮಾಂಚಕ ಇತಿಹಾಸ, ಶ್ರೀಮಂತ ಸಂಸ್ಕೃತಿ, ಅದ್ಭುತ ಸ್ಮಾರಕಗಳು ಮತ್ತು ಪರಂಪರೆಯನ್ನು ಹೊಂದಿರುವ ದೇಶ ಭಾರತ. ಪ್ರತಿಯೊಬ್ಬ ಭಾರತೀಯನು ತನ್ನ ದೇಶದ ಬಗ್ಗೆ ಹೆಮ್ಮೆ ಪಡುತ್ತಾನೆ. ಆದರೆ ನಮ್ಮಲ್ಲಿ ಅನೇಕರಿಗೆ ರಾಣಿ ಕಿ ವಾವ್, ರಾಮಪ್ಪ ದೇಗುಲ, ಆರೊವಿಲ್ಲೆ, ಬುಲಂದ್ ದರ್ವಾಜಾ, ಸರಸ್ವತಿ ಮಹಲ್ ಲೈಬ್ರೆರಿ, ವರ್ಲಿ ಚಿತ್ರಕಲೆ, ಧನು ಜಾತ್ರಾ, ಕೀಬುಲ್ ಲಮ್ಜಾವೊ ರಾಷ್ಟ್ರೀಯ ಉದ್ಯಾನ, ಸಾ ರೇ ಗಾ ಮಾ ಕಂಬಗಳು, ಕಲವಂತಿನ್ ದುರ್ಗ್, ಸತಿ ಹಸ್ತಲಿಪಿ, ಮಾರುತ್ಸಖಾ, ಗಂಡಿಕೋಟ ಗ್ರ್ಯಾಂಡ್ ಕ್ಯಾನ್ಯನ್, ನೀಲಕುರಿಂಜಿ ಮುಂತಾದ ಅನೇಕವುಗಳ ಬಗ್ಗೆ ಅರಿವಿಲ್ಲ.
ನಮ್ಮ ಶ್ರೀಮಂತ ದೇಶದ ಬಗ್ಗೆ ಹೆಚ್ಚು ತಿಳಿದಿಲ್ಲದ ಈ ಸಂಗತಿಗಳ ಬಗ್ಗೆ ನಮ್ಮ ಇತಿಹಾಸ ಪುಸ್ತಕಗಳು ಅಥವಾ ಇಂಟರ್ನೆಟ್ ಜಗತ್ತು ಬಹಳ ವಿರಳವಾಗಿ ಬೆಳಕು ಚೆಲ್ಲುತ್ತವೆ. ಕೆಲವನ್ನು ಮಾತ್ರ ಆಗಲೋ ಈಗಲೋ ಹೈಲೈಟ್ ಮಾಡಲಾಗುತ್ತದೆ. ನಮ್ಮಲ್ಲಿ ಅನೇಕರಿಗೆ ಈ ಅನೇಕ ಸಂಗತಿಗಳ ಬಗ್ಗೆ ಅರಿವೇ ಇಲ್ಲ. ಆದರೆ ನಮ್ಮ ಮಹಾನ್ ದೇಶದ ಸತ್ಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಹೇಗಾದರೂ ಮಾಡಿ ತಿಳಿದುಕೊಳ್ಳುವ ತುಡಿತ ಪ್ರತಿಯೊಬ್ಬ ಭಾರತೀಯನಲ್ಲೂ ಇದೆ. ಆದರೆ ಹೇಗೆ ತಿಳಿದುಕೊಳ್ಳಬೇಕು ಎಂಬ ಬಗ್ಗೆ ಅನೇಕರಿಗೆ ಸುಳಿವು ಇಲ್ಲ ಮತ್ತು ಅವರಿಗೆ ಭಾರತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಮಾರ್ಗವನ್ನು ತೋರಿಸಿಕೊಡಬೇಕಾದ ಅಗತ್ಯವಿದೆ. ಭಾರತೀಯರಾಗಿ, ನಮ್ಮ ದೇಶದ ಆಳ ಮತ್ತು ಅಗಲವನ್ನು ತಿಳಿದುಕೊಳ್ಳುವುದು, ಅಪರೂಪದ ಕಲಾಕೃತಿಗಳ ಬಗ್ಗೆ ತಿಳಿದುಕೊಳ್ಳುವುದು ನಿಜಕ್ಕೂ ನಮ್ಮನ್ನು ಪುಳಕಿತಗೊಳಿಸುತ್ತದೆ.
ದಿ ಗ್ಲೋರಿಯಸ್ ಭಾರತ್ I, II ಮತ್ತು III ಗಳು ಭಾರತದ ಪ್ರಾಚೀನ ಸಂಸ್ಕೃತಿ, ಧಾರ್ಮಿಕ ಶ್ರೀಮಂತಿಕೆ, ಇತಿಹಾಸಗಳು ಮತ್ತು ರಹಸ್ಯಗಳನ್ನು ಹೊರತರುವ ವಿನಮ್ರ ಪ್ರಯತ್ನವನ್ನು ಹೊಂದಿರುವ ಪುಸ್ತಕಗಳಾಗಿವೆ. ಈ ಮೂರು ಪುಸ್ತಕಗಳಲ್ಲಿ ಪ್ರತಿಯೊಂದು ಕೂಡ ‘ಮೇರಾ ಭಾರತ್ ಮಹಾನ್’ ಎಂದು ಹೇಳಲು 111 ಕಾರಣಗಳನ್ನು ಒಳಗೊಂಡಿದೆ. ವಿಷಯಗಳನ್ನು ಸಣ್ಣ ಪ್ಯಾರಾಗಳಲ್ಲಿ, ತಲಾ ಒಂದು ಪುಟದಲ್ಲಿ ಮತ್ತು ಸರಳ ಪದಗಳಲ್ಲಿ ಬರೆಯಲಾಗಿದ್ದು, ಈ ಮೂಲಕ ಯುವಕರಿಗೆ ಅರ್ಥವಾಗುವಂತೆ ಮಾಡಲಾಗಿದೆ ಮತ್ತು ವಿಷಯದ ಪ್ರಮುಖ ಅಂಶವನ್ನು ಓದುಗರಿಗೆ ಆಸಕ್ತಿದಾಯಕವನ್ನಾಗಿ ಮಾಡಲಾಗಿದೆ. ಇಂದು ಈ ಪುಸ್ತಕವನ್ನು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮತ್ತು ಭಾರತ ಸರ್ಕಾರದ ಹಿಂದಿ ಸಲಾಹಕಾರ್ ಸಮಿತಿಯ ಸದಸ್ಯ ರಾಘವೇಂಧೀರ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಜಾನೊ ಭಾರತ್ ಎಂಬ ರಸಪ್ರಶ್ನೆಯನ್ನು ಕೂಡ ಶೀಘ್ರದಲ್ಲೇ ಆನ್ಲೈನ್ನಲ್ಲಿ ನಡೆಸಲಾಗುತ್ತಿದೆ. “ಜಾನೋ ಭಾರತ್- ಐ ಆಮ್ ಎ ಪ್ರೌಡ್ ಪೇಟ್ರಿಯಾಟ್ ” ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಅಥವಾ ಭಾಗವಹಿಸುವವರಿಗೆ ಜಾನೋ ಭಾರತ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ, ಇದು ಗ್ಲೋರಿಯಸ್ ಭಾರತ್ ಥೀಮ್ ಅಡಿಯಲ್ಲಿ ಸಂಗ್ರಹಿಸಲಾದ 60 ರಸಪ್ರಶ್ನೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರಾಚೀನ ಕಾಲದಿಂದ ಬಂದಿರುವ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಶ್ರೀಮಂತ ಆಚರಣೆಗಳ ಬಗ್ಗೆ ಭಾರತದ ಯುವಕರು ಚೆನ್ನಾಗಿ ತಿಳಿದಿರಲಿ ಎಂದು ಮಾಡುವ ಪ್ರಯತ್ನ ಇದಾಗಿದೆ.
ಲೇಖಕರ ಬಗ್ಗೆ
ಡಾ. ಅನಂತ್ ಪ್ರಭು- ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಪ್ರಾಧ್ಯಾಪಕರು, ಸೈಬರ್ ಕಾನೂನು ತರಬೇತುದಾರರು- ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಸೈಬರ್ ಭದ್ರತಾ ತರಬೇತುದಾರರು- ಕರ್ನಾಟಕ ಪೊಲೀಸ್ ಅಕಾಡೆಮಿ. ಗ್ಲೋರಿಯಸ್ ಭಾರತ್ (ಭಾಗ 1, 2, ಮತ್ತು 3), ಸೈಬರ್ ಸೇಫ್ ಗರ್ಲ್ ಸೇರಿದಂತೆ ಹತ್ತು ಪುಸ್ತಕಗಳ ಲೇಖಕರಾಗಿದ್ದಾರೆ.
2019 ರಲ್ಲಿ ಇಂಡಿಯಾ ಟುಡೆ ಇವರನ್ನು ದೇಶದ 30 ತೆರೆಮರೆಯ ನಾಯಕರಲ್ಲಿ ಒಬ್ಬರೆಂದು ಗುರುತಿಸಿದೆ ಮತ್ತು ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2020ಗೆ ಇವರು ಭಾಜನರಾಗಿದ್ದಾರೆ.
ಗೂಗಲ್ ಪ್ಲೇ ಬುಕ್ಸ್ನಲ್ಲಿ ಈ ಲಿಂಕ್ಗಳನ್ನು ಬಳಸಿ ಪುಸ್ತಕ ಖರೀದಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.