ನವದೆಹಲಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಜನರು ಕೊಡುಗೆ ನೀಡುವಂತೆ ಕೋರಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ತಮ್ಮ ಅಭಿಮಾನಿಗಳಿಗೆ ದೇಣಿಗೆ ನೀಡಲು ಪ್ರೇರೇಪಿಸಲು ಸಲುವಾಗಿ ಅವರು ರಾಮಾಯಣದ ‘ರಾಮಸೇತು’ ನಿರ್ಮಾಣದಲ್ಲಿ ಸಹಕಾರ ನೀಡಿದ ಅಳಿಲಿನ ಕಥೆಯನ್ನು ವಿವರಿಸಿದ್ದಾರೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೊಡುಗೆಯನ್ನು ನೀಡಲು ನಮಗೆ ಅಳಿಲು ಪ್ರೇರಣೆಯಾಗಬೇಕು ಎಂದುಅವರು ಹೇಳಿದ್ದಾರೆ.
“ಇಂದು, ನಮ್ಮ ಸರದಿ. ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನಿಗಾಗಿ ದೊಡ್ಡ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ. ನಮ್ಮಲ್ಲಿ ಕೆಲವರು ‘ವಾನರರು’ ಆಗಬೇಕು, ನಮ್ಮಲ್ಲಿ ಕೆಲವರು ‘ಅಳಿಲು’ ಆಗಬೇಕು ಮತ್ತು ಈ ಐತಿಹಾಸಿಕ ಕಾರಣಕ್ಕೆ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆಗಳನ್ನು ನೀಡಬೇಕು . ನಾನು ಈ ಕಾರ್ಯ ಪ್ರಾರಂಭಿಸುತ್ತಿದ್ದೇನೆ. ನೀವು ನನ್ನೊಂದಿಗೆ ಸೇರುತ್ತೀರಿ ಎಂದು ನನಗೆ ಖಾತ್ರಿಯಿದೆ, ಇದರಿಂದಾಗಿ ನಮ್ಮ ನಂತರ ಬರುವ ಪೀಳಿಗೆಗಳು ಭಗವಾನ್ ರಾಮ ನಮಗೆ ಕಲಿಸಿದ ಜೀವನ ಪಾಠಗಳನ್ನು ಅನುಸರಿಸಲು ಪ್ರೇರೇಪಿಸಲ್ಪಡುತ್ತಾರೆ” ಎಂದು ಹೇಳಿದ್ದಾರೆ.
“ಅಯೋಧ್ಯೆಯಲ್ಲಿ ನಮ್ಮ ಶ್ರೀ ರಾಮನ ಭವ್ಯವಾದ ದೇವಾಲಯದ ನಿರ್ಮಾಣ ಪ್ರಾರಂಭವಾಗಿದೆ ಎಂಬುದು ಹೃದಯಸ್ಪರ್ಶಿ ಸಂಗತಿಯಾಗಿದೆ. ಈಗ ಕೊಡುಗೆಗಳನ್ನು ನೀಡುವುದು ನಮ್ಮ ಸರದಿ. ನಾನು ಪ್ರಾರಂಭಿಸಿದೆ, ಆಶಾದಾಯಕವಾಗಿ ನೀವೂ ಸಹ ಸೇರುತ್ತೀರಿ. ಜೈ ಶ್ರೀ ರಾಮ್” ಎಂದು ಅವರು ಟ್ವೀಟ್ ಮಾಡಿದ್ದಾರೆ.
बहुत खुशी की बात है कि अयोध्या में हमारे श्री राम के भव्य मंदिर का निर्माण शुरू हो चूका है…अब योगदान की बारी हमारी है l मैंने शुरुआत कर दी है, उम्मीद है आप भी साथ जुड़ेंगे l जय सियाराम 🙏🏻 pic.twitter.com/5SvzgfBVCf
— Akshay Kumar (@akshaykumar) January 17, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.