ಕುವೈತ್: ವಿವೇಕಾನಂದ ಜಯಂತಿಯ ಪ್ರಯುಕ್ತ ಭಾರತೀಯ ಪ್ರವಾಸಿ ಪರಿಷತ್ ಕುವೈತ್ ಕರ್ನಾಟಕ ಘಟಕ ಹಮ್ಮಿಕೊಂಡ ಅನಿವಾಸಿ ಕನ್ನಡಿಗರೊಂದಿಗೆ ಜೀವನ ಸಂದೇಶ ಕಾರ್ಯಕ್ರಮ ಜ. 15 ರಂದು ನಡೆಯಿತು.
ಫೇಸ್ಬುಕ್ ಲೈವ್ ಮೂಲಕ ಈ ಕಾರ್ಯಕ್ರಮ ನಡೆದಿದ್ದು, ಅವಧೂತ ಶ್ರೀ ವಿನಯ ಗುರೂಜಿ ಅವರು ‘ಅನಿವಾಸಿ ಕನ್ನಡಿಗರೊಂದಿಗೆ ಜೀವನ ಸಂದೇಶ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಜಾತಿ ಮತ್ತು ಪ್ರಾಂತ್ಯದ ಮಠಾಧೀಶರು ನಿಲ್ಲುವ ನೀರಾಗದೆ ಹರಿಯುವ ನೀರಾಗಿ ಜನರನ್ನು ಜಾತಿ ಮತ ಪಂಗಡವನ್ನು ಬಿಟ್ಟು ಭಾರತೀಯತೆಯಲ್ಲಿ ಬದುಕು ಕಟ್ಟಲು ಪ್ರಚೋದಿಸಬೇಕು. ರಾಜಕೀಯದಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಇಚ್ಚಿಸುವ ಯುವಜನತೆ ನರೇಂದ್ರ ಮೋದಿಯವರನ್ನು ಮತ್ತು ಅವರ ಕೆಲಸ ಕಾರ್ಯವನ್ನು ಅನುಕರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಮಾತನಾಡಿ, ಭಾರತವನ್ನು ವಿಶ್ವಗುರು ಮಾಡುವಲ್ಲಿ ಪ್ರತಿಯೊಬ್ಬ ಭಾರತೀಯರ ಪಾತ್ರ ಅತಿ ಮುಖ್ಯವಾದುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರವಿ ಶೆಟ್ಟಿ, ಡಾ ಆರತಿ ಕೃಷ್ಣ, ತುಳುಕೂಟ ಕುವೈತ್ ನ ಮಾಜಿ ಅಧ್ಯಕ್ಷ ರಮೇಶ್ ಕಿದಿಯೂರ್, ಬಹರೇನ್ ಬಂಟರ ಸಂಘದ ಅಧ್ಯಕ್ಷ ಮೋಹನದಾಸ ರೈ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಅಬುದಾಬಿ ಕನ್ನಡ ಕೂಟದ ಅಧ್ಯಕ್ಷರ ಸರ್ವೋತ್ತಮ ಶೆಟ್ಟಿ, ತುಳುಕೋಟ ಕುವೈತ್ ಅಧ್ಯಕ್ಷ ರಮೇಶ್ ಭಂಡಾರಿ, ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣ ಪೂಜಾರಿ, ಬಂಟರ ಸಂಘ ಕುವೈತ್ ಅಧ್ಯಕ್ಷ ಗುರುಪ್ರಸಾದ ಹೆಗಡೆ, ಹಾಗೂ ಕನ್ನಡ ಕೂಟ ಕುವೈತ್ ನ ಮಾಜಿ ಅಧ್ಯಕ್ಷ ರಾಜೇಶ್ ವಿಟ್ಟಲ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಕಾರ್ಯಕ್ರಮ ವೀಕ್ಷಣೆಗೆ ಅವಧೂತ ಫೇಸ್ಬುಕ್ ಪೇಜ್, BPP Kuwait Karnataka wing Facebook page ನಲ್ಲಿ , ಝೂಮ್ ಮೀಟಿಂಗ್ನಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.