ಬೆಂಗಳೂರು: ದೇಶದ ಮೊದಲ ಸ್ವದೇಶೀ ವಿನ್ಯಾಸ ಹೊಂದಿರುವ ಚಾಲಕ ರಹಿತ ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೋಕಾರ್ಪಣೆಗೊಳಿಸಿದರು.
ನಗರದ ಬಿಇಎಂಎಲ್ ಉತ್ಪಾದನಾ ಘಟಕದಲ್ಲಿ ಈ ಕೋಚ್ ಅನ್ನು ಅನಾವರಣಗೊಳಿಸಲಾಯಿತು.
ಇದು ಆತ್ಮನಿರ್ಭರ ಭಾರತದ ಕನಸಿಗೆ ಕೊಡುಗೆಯಾಗಿದೆ. ಸ್ವದೇಶೀ ವಸ್ತುಗಳಿಗೆ ಜೀವ ತುಂಬುವ ಜನರೇ ಆತ್ಮನಿರ್ಭರದ ನಿಜವಾದ ಯೋಧರು ಎಂದು ಕೇಂದ್ರ ಸಚಿವರು ಇದೇ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಬಿಇಎಂಎಲ್ ಎಂಜಿನಿಯರ್ಗಳು ಮತ್ತು ತಂತ್ರಜ್ಞರ ತಂಡವನ್ನು ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.
ಇನ್ನು ಚಾಲಕ ರಹಿತ ಸ್ವದೇಶಿ ವಿನ್ಯಾಸದ ರೈಲ್ವೆ ಇಂಜಿನ್ ಕೋಚ್ಗಳ ಬಗ್ಗೆ ಬಿಇಎಂಎಲ್ ಮಾಹಿತಿ ನೀಡಿದ್ದು, ಇದು ಸ್ಟೇನ್ಲೆಸ್ ಸ್ಟೀಲ್ನಿಂದ ರಚಿಸಲ್ಪಟ್ಟ ಹೊರಮೈ ಹೊಂದಿದೆ. ಆರು ಕೋಚ್ಗಳನ್ನು ಒಳಗೊಂಡಿರುವ ಮೆಟ್ರೋ ರೈಲು ಸೆಟ್ನಲ್ಲಿ 2280 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಮುಂಬೈ ಮೆಟ್ರೋಪಾಲಿಟನ್ ರೀಜನ್ ಡೆವಲಪ್ಮೆಂಟ್ ಅಥಾರಿಟಿಯ ಎಂಆರ್ಎಸ್ 1 ಯೋಜನೆಗಾಗಿ ಇಂತಹ ಒಟ್ಟು 576 ಕೋಚ್ಗಳನ್ನು ಬಿಇಎಂಎಲ್ ತಯಾರಿಸಲಿದ್ದು, 2024ರ ಜನವರಿ ವರೆಗೆ ಇದನ್ನು ಹಂತ ಹಂತವಾಗಿ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.