ಅಂಕೋಲಾ: ನಗರದ ಕುಂಬಾರಕೇರಿಯಲ್ಲಿರುವ ಪುರಾತನ ಕದಂಬೇಶ್ವರ ದೇವಾಲಯದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ 2 ತಾಮ್ರದ ಶಾಸನಗಳು ಪತ್ತೆಯಾಗಿವೆ.
ದೇಗುಲದ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮಣ್ಣು ಎತ್ತುವ ಸಂದರ್ಭದಲ್ಲಿ ತಾಮ್ರದ ಶಾಸನಗಳು ದೊರೆತಿವೆ. ಇದನ್ನು ದೇಗಲದ ಸಮಿತಿ ಅಧ್ಯಕ್ಷ ವಿಟ್ಠಲರಾವ್ ವರ್ಣೇಕರ್ ಅವರು ಸ್ವಚ್ಛಗೊಳಿಸಿ ಶಾಸನಗಳ ಅಧ್ಯಯನ ನಡೆಸುತ್ತಿರುವ ಶ್ಯಾಮಸುಂದರ ಗೌಡ ಅವರ ಗಮನಕ್ಕೆ ತಂದಿದ್ದಾರೆ. ಇವುಗಳನ್ನು ಪರಿಶೀಲನೆ ನಡೆಸಿರುವ ಅವರು, ಇದು ಕ್ರಿ.ಶ. 975 ರಲ್ಲಿ ಬರೆಯಲಾಗಿರುವ ಶಾಸನ. 1046 ವರ್ಷಗಳ ಹಿಂದಿನ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಬರೆಯಲ್ಪಟ್ಟ ಶಾಸನಗಳಾಗಿರುವುದಾಗಿ ತಿಳಿಸಿದ್ದಾರೆ.
ಒಂದು ಶಾಸನದಲ್ಲಿ ಚಾಲುಕ್ಯರ ಎರಡನೇ ತೈಲಪನ ಬಗ್ಗೆ ಉಲ್ಲೇಖಿಸಲಾಗಿದೆ. ಶಾಲಿವಾಹನ ಶಖೆ 879 ಬಾಧ್ರಪದ ಮಾಸ, ಆದಿತ್ಯವಾರ, ಅಮವಾಶೆ ಎಂದು ಬರೆಯಲಾಗಿದೆ. ಇದರ ಮುಂದುವರಿದ ಭಾಗ ಮುಂದಿನ ತಾಮ್ರ ಶಾಸನದಲ್ಲಿರುವ ಸಾಧ್ಯತೆ ಇದೆ ಎಂದು ಶ್ಯಾಮಸುಂದರ್ ಮಾಹಿತಿ ನೀಡಿದ್ದಾರೆ. ಸಿಕ್ಕಿರುವ ಇನ್ನೊಂದು ಶಾಸನವನ್ನು ಓದುವುದು ಸಾಧ್ಯವಾಗಿಲ್ಲ ಅದು ಅಸ್ಪಷ್ಟವಾಗಿದ್ದು, ಅದನ್ನು ಮತ್ತಷ್ಟು ಸ್ವಚ್ಛಗೊಳಿಸಿ ಓದಲು ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.