ಚೆನ್ನೈ; ಇಂದು ತಮಿಳುನಾಡಿನ ಮಧುರೈಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಲ್ಲಿಕಟ್ಟು ಉತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.
ಜಲ್ಲಿಕಟ್ಟು ಎತ್ತು ಓಟ ತಮಿಳುನಾಡಿನ ಸಾಂಪ್ರದಾಯಿಕ ಪೊಂಗಲ್ ಆಚರಣೆಯ ಒಂದು ಭಾಗವಾಗಿದೆ. ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿ, “ತಮಿಳುನಾಡಿನ ಮಧುರೈನಲ್ಲಿ ನಿಮ್ಮೊಂದಿಗೆ ಪೊಂಗಲ್ ಆಚರಿಸಲು ಬರುತ್ತಿದ್ದೇನೆ. ನಾನು ಮಧುರೈನಲ್ಲಿರುವ ಜಲ್ಲಿಕಟ್ಟು ಉತ್ಸವದಲ್ಲಿ ಭಾಗವಹಿಸುತ್ತಿದ್ದೇನೆ” ಎಂದು ಹೇಳಿದ್ದರು.
ವಿಶೇಷವೆಂದರೆ, ಕೆಲವೇ ವರ್ಷಗಳ ಹಿಂದೆ ಕಾಂಗ್ರೆಸ್ ಜಲ್ಲಿಕಟ್ಟು ಉತ್ಸವವನ್ನು ತೀವ್ರವಾಗಿ ವಿರೋಧಿಸಿತ್ತು. ಅದನ್ನು ನಿಷೇಧಿಸಲು ತುದಿಗಾಲಲ್ಲಿ ನಿಂತಿತ್ತು.
2011 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಜಲ್ಲಿಕಟ್ಟು ಉತ್ಸವದಲ್ಲಿ ಎತ್ತುಗಳ ಬಳಕೆಯನ್ನು ನಿಷೇಧಿಸಿತ್ತು. ಸುಪ್ರೀಂಕೋರ್ಟ್ ಕೂಡ ನಂತರ ಜಲ್ಲಿಕಟ್ಟು ನಿಷೇಧಿಸಿತು. ಅಂದಿನಿಂದ, ತಮಿಳುನಾಡಿನ ಜನರು ತಮ್ಮ ಸಾಂಪ್ರದಾಯಿಕ ಕಾರ್ಯಕ್ರಮಕ್ಕಾಗಿ ಹೋರಾಡುತ್ತಿದ್ದಾರೆ. 2014 ಮತ್ತು 2017 ರ ನಡುವೆ, ಜಲ್ಲಿಕಟ್ಟು ನಡೆಯಿತು ಆದರೆ ಅದನ್ನು ಸುಪ್ರೀಂಕೋರ್ಟ್ನ ಆದೇಶಕ್ಕೆ ವಿರುದ್ಧವೆಂದು ಪರಿಗಣಿಸಲಾಯಿತು.
ವಿಶೇಷವೆಂದರೆ, 2017 ರಲ್ಲಿ, ತಮಿಳುನಾಡು ಸರ್ಕಾರವು ಭಾರತದ ಪ್ರಧಾನಿ ಮೋದಿಯವರ ಬೆಂಬಲದೊಂದಿಗೆ ಮಸೂದೆಯನ್ನು ಅಂಗೀಕರಿಸಿತು, ಅದು ಜಲ್ಲಿಕಟ್ಟು ಆಚರಣೆಗೆ ಅನುಮತಿಸಿತು. ಮೊದಲ ಕಾನೂನಾತ್ಮಕ ಜಲ್ಲಿಕಟ್ಟು ಆಚರಣೆಯನ್ನು ಫೆಬ್ರವರಿ 1, 2017 ರಂದು ಮಧುರೈ ಜಿಲ್ಲೆಯಲ್ಲಿ ನಡೆಸಲಾಯಿತು.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ನಿಂದ ಹಿಡಿದು ಹಲವಾರು ಕಾಂಗ್ರೆಸ್ ನಾಯಕರು ಜಲ್ಲಿಕಟ್ಟು ಅನ್ನು ಯಾವಾಗಲೂ ವಿರೋಧಿಸುತ್ತಿದ್ದರು.
ಆದರೀಗ ರಾಹುಲ್ ಗಾಂಧಿ ದೊಡ್ಡದಾಗಿ ಫೋಸ್ ನೀಡುತ್ತಾ ಜಲ್ಲಿಕಟ್ಟು ವೀಕ್ಷಣೆ ಮಾಡಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಬದಲಾಗುವುದು ಅಂದರೆ ಬಹುಶಃ ಇದೆ ಇರಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.