ಉಡುಪಿ: ಹಿಂದಿ ವಾಹಿನಿ ಸೋನಿ ಟಿವಿ ಪ್ರಸಾರ ಮಾಡುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮಕ್ಕೆ ಸಮಾಜಮುಖಿ ಕಾರ್ಯಗಳ ಮೂಲಕವೇ ಹೆಸರು ಮಾಡಿರುವ ರಾಜ್ಯದ ಉಡುಪಿ ಜಿಲ್ಲೆಯ ರವಿ ಕಟಪಾಡಿ ಅವರು ಆಯ್ಕೆಯಾಗಿದ್ದಾರೆ.
ಜ. 12 ರಂದು ಇವರು ಭಾಗವಹಿಸಿರುವ ಎಪಿಸೋಡ್ ಚಿತ್ರೀಕರಣವಾಗಿದ್ದು, ಜ. 15 ರಂದು ಈ ಕಾರ್ಯಕ್ರಮವನ್ನು ಸೋನಿ ವಾಹಿನಿ ಪ್ರಸಾರ ಮಾಡಲಿದೆ. ಉಡುಪಿಯಲ್ಲಿ ಅಷ್ಟಮಿಯ ಸಂದರ್ಭದಲ್ಲಿ ಚಿತ್ರ ವಿಚಿತ್ರ ವೇಷಗಳನ್ನು ತೊಟ್ಟು ಹಣ ಸಂಗ್ರಹಿಸಿ ಅದನ್ನು ಕಷ್ಟದಲ್ಲಿರುವ ಕುಟುಂಬಗಳಿಗೆ, ಅನಾರೋಗ್ಯ ಪೀಡಿತರಿಗೆ ಸೇರಿದಂತೆ ಇನ್ನಿತರರಿಗೆ ನೀಡುವ ಮೂಲಕ ನೊಂದವರ ಬಾಳಿಗೆ ರವಿ ಬೆಳಕಾಗುತ್ತಿದ್ದಾರೆ. ಆ ಮೂಲಕವೇ ಉಡುಪಿಯ ಹೊರತಾದಂತೆಯೂ ರವಿ ಕಟಪಾಡಿ ಅವರು ಚಿರಪರಿಚಿತರಾಗಿದ್ದಾರೆ.
ಇವರು ಮಾಡುತ್ತಿರುವ ಸಮಾಜಿಮುಖಿ ಸೇವೆಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಅವರನ್ನು ಈ ಕಾರ್ಯಕ್ರಮಕ್ಕೆ ಸೋನಿ ವಾಹಿನಿ ಆಯ್ಕೆ ಮಾಡಿದೆ. ಈ ಸಂಬಂಧ ವಾಹಿನಿ ರವಿ ಅವರಿಗೆ ಹತ್ತು ದಿನಗಳ ಹಿಂದೆ ಸೋನಿ ವಾಹಿನಿಯಿಂದ ಕರೆ ಬಂದಿದ್ದು, ಕೌನ್ ಬನೇಗಾ ಕರೋಡ್ ಪತಿಯಲ್ಲಿ ಭಾಗವಹಿಸುವಂತೆ ಕೇಳಿಕೊಂಡಿತ್ತು. ಆದರೆ ಆರಂಭದಲ್ಲಿ ಇದಕ್ಕೆ ಸಮ್ಮತಿ ವ್ಯಕ್ತಪಡಿಸದ ರವಿ ಅವರಿಗೆ ವಾಹಿನಿಯವರು ಮತ್ತಷ್ಟು ಮನವಿ ಮಾಡಿಕೊಂಡ ಬಳಿಕ ಒಪ್ಪಿಗೆ ಸೂಚಿಸಿದ್ದಾರೆ. ರವಿ ಅವರ ಸಮಾಜ ಸೇವೆಯನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದಲೇ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಿರುವುದಾಗಿ ವಾಹಿನಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.