ಮಂಡ್ಯ: ರಾಜ್ಯದ ಮಂಡ್ಯ ಜಿಲ್ಲೆಯ ಮರ್ಲಗಲ್ಲ-ಆಲಪಟ್ಟಣ ಪ್ರದೇಶದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ. ಇದು ದೇಶದ ಲೀಥಿಯಂ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರಮುಖ ಮೈಲುಗಲ್ಲಾಗಿದ್ದು, ದೇಶದ ಮೊದಲ ಲೀಥಿಯಂ ನಿಕ್ಷೇಪ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಡಿಎಇ (ಕೇಂದ್ರ ಪರಮಾಣು ಶಕ್ತಿ ಇಲಾಖೆ)ಯ ಅಂಗವಾಗಿರುವ ಪರಮಾಣು ಖನಿಜಗಳ ನಿರ್ದೇಶನಾಲಯ ಪರಿಶೋಧನೆ ಮತ್ತು ಸಂಶೋಧನೆ (ಎಂಎಂಡಿ)ಯ ಪ್ರಾಥಮಿಕ ಸಂಶೋಧನೆಯ ಸಂದರ್ಭದಲ್ಲಿ ಈ ಲೀಥಿಯಂ ನಿಕ್ಷೇಪವನ್ನು ಆವಿಷ್ಕಾರ ಮಾಡಲಾಗಿದೆ. ಇದರ ಜೊತೆಯಲ್ಲಿಯೇ, ರಾಜಸ್ಥಾನ ಮತ್ತು ಗುಜರಾತ್ನ ಉಪ್ಪುನೀರಿನ ಪೂಲ್ಗಳಿಂದಲೂ, ಒಡಿಶಾ, ಚತ್ತೀಸ್ಗಢದ ಮೈಕಾ ಬೆಲ್ಟ್ಗಳಿಂದಲೂ ಲೀಥಿಯಂ ಅನ್ನು ಹೊರತೆಗೆಯುವ ನಿಟ್ಟಿನಲ್ಲಿ ಪೂರಕ ಪರಿಶೋಧನೆಯಲ್ಲಿ ನಿರ್ದೇಶನಾಲಯ ತೊಡಗಿಸಿಕೊಂಡಿರುವುದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಮಂಡ್ಯದಲ್ಲಿ ದೊರೆತಿರುವ ಲೀಥಿಯಂ ನಿಕ್ಷೇಪದ ಪ್ರಮಾಣ 1600 ಟನ್ಗಳಷ್ಟಿದೆ ಎಂದು ಮೂಲಗಳು ತಿಳಿಸಿವೆ. ವಿದೇಶಗಳ ಗಣಿಗಳಿಗೆ ಹೋಲಿಸಿದರೆ ಈ ಪ್ರಮಾಣ ಚಿಕ್ಕದಾದರೂ, ವಿದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವ ಪಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.