ಬೆಂಗಳೂರು: ಈ ಬಾರಿ ಭೌತಿಕ ಮತ್ತು ಆನ್ಲೈನ್ ಮೂಲಕ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಯ ರಾಷ್ಟ್ರೀಯ ತೋಟಗಾರಿಕಾ ಮೇಳ ನಡೆಯಲಿದೆ. ಫೆ. 8 ರಿಂದ 12 ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಕೊರೋನ ಹಿನ್ನೆಲೆಯಲ್ಲಿ ಈ ಬಾರಿ ಈ ಮೇಳದಲ್ಲಿ ಕೇವಲ ಕೃಷಿಕರಿಗೆ ಮಾತ್ರವೇ ಭಾಗವಹಿಸುವುದಕ್ಕೆ ಅವಕಾಶವನ್ನು ನೀಡಲಾಗಿದೆ. ಸುಮಾರು 30 ಸಾವಿರದಷ್ಟು ರೈತರಿಗೆ ಭೌತಿಕವಾಗಿ ಈ ಮೇಳದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಈ ಮೇಳಕ್ಕೆ ಸಂಬಂಧಿಸಿದಂತೆ 721 ಕೇಂದ್ರೀಯ ವಿಜ್ಞಾನ ಕೇಂದ್ರಗಳು ಸಹ ಸಹಭಾಗಿತ್ವ ವಹಿಸಿಕೊಳ್ಳಲಿವೆ. 150-200 ಮಂದಿ ರೈತರು ಪ್ರತಿ ಕೇಂದ್ರದಲ್ಲಿಯೂ ಇರಲಿದ್ದಾರೆ. ನೂತನ ತಂತ್ರಜ್ಞಾನಗಳ ಅನ್ವೇಷಣೆ, ಬಳಕೆ, ಚರ್ಚೆಗೆ ವೇದಿಕೆ ಒದಗಿಸುವುದು ಮತ್ತು ಹೊಸತನಗಳನ್ನು ಪರಿಚಯಿಸುವುದು, ಆತ್ಮನಿರ್ಭರ ಕೃಷಿ ಪದ್ಧತಿಗೆ ಬೆಂಬಲ ಸೂಚಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.