ಕೋಲಾರ: ರಾಜ್ಯದ ರೈತರ ಸಮಸ್ಯೆಗಳ ಅಧ್ಯಯನದ ದೃಷ್ಟಿಯಿಂದ ಕೃಷಿ ಸಚಿವ ಬಿ. ಸಿ. ಪಾಟೀಲ್ ಅವರು ಹಮ್ಮಿಕೊಂಡಿರವ ‘ರೈತರೊಂದಿಗೆ ಒಂದು ದಿನ’ ಎಂಬ ಕಾರ್ಯಕ್ರಮದ ಅಂಗವಾಗಿ ಕೃಷಿ ಸಚಿವರು ಇಂದು ಕೋಲಾರಕ್ಕೆ ತೆರಳಿದ್ದು, ಅಲ್ಲಿನ ರೈತರ ಸಮಸ್ಯೆಗಳನ್ನು ಆಲಿಸಿದ್ದಾರೆ.
2020 ರ ನವೆಂಬರ್ ತಿಂಗಳಿನಿಂದ ಕೃಷಿ ಸಚಿವರು ಆರಂಭ ಮಾಡಿರುವ ಈ ಕಾರ್ಯಕ್ರಮದಲ್ಲಿ ರೈತರ ಕೃಷಿ ಭೂಮಿಗೆ ತೆರಳಿ ಅವರ ಕಷ್ಟಸುಖಗಳಿಗೆ ದನಿಯಾಗುವ ಕಾರ್ಯ ನಡೆಯುತ್ತಿದೆ. ನ. 14 ರಂದು ಮಂಡ್ಯ ಜಿಲ್ಲೆಯ ರೈತರ ಜೊತೆಗೆ ಮಾತುಕತೆ ನಡೆಸಿದ್ದ ಸಚಿವರು ಇಂದು ಕೋಲಾರ ಜಿಲ್ಲೆಗೆ ತೆರಳಿದ್ದು, ಕೋಲಾರದ ರೈತರ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಎಚ್. ನಾಗೇಶ್ ಅವರು ಸಹ ಸಚಿವರ ಜೊತೆಗೆ ಭಾಗವಹಿಸಿದ್ದರು.
ಕೋಲಾರದ ಬೇವಳ್ಳಿ ಗ್ರಾಮದಿಂದ ಸಚಿವರು ತಮ್ಮ ಕೃಷಿ ಪ್ರವಾಸವನ್ನು ಆರಂಭ ಮಾಡಿದ್ದು, ಇಲ್ಲಿನ ಅಶ್ವತ್ಥಮ್ಮ ಎಂಬ ರೈತ ಮಹಿಳೆಯ ಸಮಗ್ರ ಕೃಷಿ ತಾಕಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ರೈತರು ಸಚಿವರಿಗೆ ಅಭೂತಪೂರ್ವ ಸ್ವಾಗತವನ್ನು ನೀಡಿದ್ದಾರೆ. ಹಾಗೆಯೇ, ಅಜೋಲ್ಲಾ ತೊಟ್ಟಿ ವೀಕ್ಷಣೆ, ರೇಷ್ಮೆ ಹುಳು ಸಾಕಾಣಿಕೆ ಮನೆ ವೀಕ್ಷಣೆ ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳಲ್ಲಿ ಸಚಿವರು ಭಾಗವಹಿಸಿದ್ದಾರೆ. ಹಾಗೆಯೇ ವಡ್ಡಹಳ್ಳಿಯ ಕೃಷಿ ವಸ್ತುಗಳ ಪ್ರದರ್ಶನ ಮಳಿಗೆಯನ್ನು ಇದೇ ಸಂದರ್ಭದಲ್ಲಿ ಸಚಿವರು ಉದ್ಘಾಟಿಸಿದ್ದಾರೆ. ಕೃಷಿ ಇಲಾಖೆಯ ವತಿಯಿಂದ ಯಂತ್ರೋಪಕರಣಗಳ ವಿತರಣೆ, ಪ್ರಗತಿಪರ ರೈತ ದಂಪತಿಗಳಿಗೆ ಸನ್ಮಾನ ಮೊದಲಾದ ಹಲವು ಕಾರ್ಯಕ್ರಮಗಳು ಸೇರಿದಂತೆ ಇನ್ನೂ ಹಲವಾರು ರೈತ ಸ್ನೇಹಿ ಕಾರ್ಯಕ್ರಮಗಳಲ್ಲಿ ಸಚಿವರು ಭಾಗವಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.