ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ‘ಕರ್ನಾಟಕ ಕಲಾಶ್ರೀ’ ಪುರಸ್ಕಾರಕ್ಕೆ ಹಿರಿಯ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಅಕಾಡೆಮಿಯ ಅಧ್ಯಕ್ಷ ಆನೂರು ಅನಂತ ಕೃಷ್ಣ ಶರ್ಮ ಅವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಈ ಪುರಸ್ಕಾರಕ್ಕೆ ಹಿರಿಯ ಸಾಧಕರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಹಿಂದೂಸ್ತಾನಿ ಸಂಗೀತಕ್ಕೆ ಸಂಬಂಧಿಸಿದಂತೆ ಗೌರವ ಪ್ರಶಸ್ತಿಗ ಆರ್ ಪಿ ಅಸುಂಡಿ, ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಮಾ ಅರವಿಂದ ಹರಿಹರಪುರ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿದಂತೆ ಮಧೂರು ಪಿ ಬಾಲಸುಬ್ರಹ್ಮಣ್ಯಂ ಉಡುಪಿ, ಘಟಂ- ಸುಕನ್ಯಾ ರಾಂ ಗೋಪಾಲ್ ಬೆಂಗಳೂರು, ಮೃದಂಗ- ಸುರೂಳಿ ಗಣೇಶ್ ಮೂರ್ತಿ ಚಿಕ್ಕಮಗಳೂರು, ನಾದಸ್ವರ: ಮುರಳಿ ಶ್ರೀರಂಗಪಟ್ಟಣ, ಹಿಂದೂಸ್ತಾನಿ ಸಂಗೀತ ಗಾಯನ: ಶ್ರೀಪಾದ ಹೆಗಡೆ ಧಾರವಾಡ, ಬೆಳಗಾಂ ನ ಪಂ. ರಾಜಪ್ರಭು ಧೋತ್ರೆ, ಟಿ ರಂಗ ಪೈ ತೋನ್ಸೆ ಅವರನ್ನು ಆಯ್ಕೆ ಮಾಡಲಾಗಿದೆ.
ನೃತ್ಯ ತಬಲಾ ಕ್ಷೇತ್ರದಲ್ಲಿ ನೃತ್ಯ ಗುರು ವಿದುಷಿ ನಯನಾ ರೈ ಪುತ್ತೂರು, ಭರತನಾಟ್ಯ: ಪ್ರವೀಣ ಕುಮಾರ್ ಬೆಂಗಳೂರು, ಕಥಕ್: ಮಧು ನಟರಾಜ್ ಬೆಂಗಳೂರು, ನೃತ್ಯ, ಮೃದಂಗ: ಜಿ ಗುರುಮೂರ್ತಿ ತುಮಕೂರು ಮೊದಲಾದವರನ್ನು ಆಯ್ಕೆ ಮಾಡಲಾಗಿದೆ. ಮಂಡ್ಯದ ಉಪಾಸನಾ ಮೋಹನ್ ಅವರಿಗೆ ಸುಗಮ ಸಂಗೀತ, ಬೀದರ್ನ ವೈಕುಂಠದತ್ತ ಮಹಾರಾಜ್ (ಭಾಗವತರ), ತುಮಕೂರಿನ ಜಿ ಸೋಮಶೇಖರ್ ದಾಸ್ ಅವರನ್ನು ಆಯ್ಕೆ ಮಾಡಲಾಗಿದೆ. ಗಮಕ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಎಚ್ ಎಸ್ ಗೋಪಾಲ್, ಕೀ ಬೋರ್ಡ್ ವಾದನಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರಶಸ್ತಿಯನ್ನು ಮೈಸೂರಿನ ಗಣೇಶ್ ಭಟ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಅಕಾಡೆಮಿಯ ಮೂಲಗಳು ತಿಳಿಸಿವೆ.
ಪುರಸ್ಕಾರ ಪ್ರದಾನ ಮಾಡುವ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿಯೂ ಅಕಾಡೆಮಿ ಮಾಹಿತಿ ನೀಡಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.