ಚಿಕ್ಕಮಗಳೂರು: 23 ನೇ ವರ್ಷದ ದತ್ತ ಜಯಂತಿ ಅಭಿಯಾನಕ್ಕೆ ಚಾಲನೆ ದೊರೆತಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರು ದತ್ತ ಮಾಲೆ ಧರಿಸಿದ್ದಾರೆ.
ದತ್ತ ಮಾಲಾಧಾರಿ ರವಿ ಅವರು ಭಿಕ್ಷಾಟನೆ ಸಹ ನಡೆಸಿದ್ದು, ಮನೆ ಮನೆಗೆ ತೆರಳಿ ಪಡಿ ಸಂಗ್ರಹ ಮಾಡಿದ್ದಾರೆ. ಸಿ. ಟಿ. ರವಿ ಅವರನ್ನು ಒಳಗೊಂಡಂತೆ 9 ಜನ ದತ್ತ ಮಾಲಾಧಾರಿಗಳ ತಂಡದಿಂದ 9 ಮನೆಗಳಲ್ಲಿ ಭಿಕ್ಷಾಟನೆ ನಡೆದಿದೆ. ಈ ಪಡಿಯ ಇರುಮುಡಿಯ ಜೊತೆಗೆ ದತ್ತ ಮಾಲೆ ಧರಿಸಿದ ಭಕ್ತರು ದತ್ತ ಪೀಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಈ ಬಾರಿ ನಡೆಯಲಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ, ಚಿಕ್ಕಮಗಳೂರು ಸಂಪೂರ್ಣ ಕೇಸರಿಮಯವಾಗಿದ್ದು, ಆಚರಣೆಗೆ ಸಕಲ ಸಿದ್ಧತೆಗಳನ್ನು ನಡೆಸಿದೆ ಎಂದು ಮೂಲಗಳು ತಿಳಿಸಿವೆ.
“ಭವತಿ ಭಿಕ್ಷಾಂದೇಹಿ”
ದತ್ತ ಜಯಂತಿಯ ಅಂಗವಾಗಿ ದತ್ತಮಾಲಾ ಧರಿಸಿದ ಮಾಲಾಧಾರಿಗಳು ಆಚರಣೆಯ ಭಾಗವಾಗಿ ಮನೆ ಮನೆಗೆ ಭೇಟಿ ನೀಡಿ ಮಾತೆಯರಿಂದ ಭಿಕ್ಷಾನ್ನ ಸ್ವೀಕರಿಸಲಾಯಿತು…#ದತ್ತಜಯಂತಿ pic.twitter.com/pdewpPDUoO— C T Ravi 🇮🇳 ಸಿ ಟಿ ರವಿ (@CTRavi_BJP) December 28, 2020
Popularly known as “Bhikshaatane”, we Maladharis sought foodgrains and blessings from the people of Chikkamagaluru.
This ritual is part of the annual Datta Jayanti celebrations. It is my punya that people welcomed us and blessed us wholeheartedly.#DattaJayanti pic.twitter.com/Yz99Huk9Uy
— C T Ravi 🇮🇳 ಸಿ ಟಿ ರವಿ (@CTRavi_BJP) December 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.