ನವದೆಹಲಿ: ಮಾನವೀಯ ನೆರವುಗಳನ್ನು ಹೊತ್ತ ಭಾರತೀಯ ನೌಕಾ ಹಡಗು ಕಿಲ್ತಾನ್ ನಿನ್ನೆ ವಿಯೆಟ್ನಾಂನ ಹೊ ಚಿ ಮಿನ್ಹ್ ನಗರದ ನ್ಹಾ ರೋಂಗ್ ಬಂದರಿಗೆ ಆಗಮಿಸಿದ್ದು, ಅಲ್ಲಿನ ಪ್ರವಾಹ ಪೀಡಿತ ಜನರಿಗೆ 15 ಟನ್ ಪರಿಹಾರ ಸಾಮಗ್ರಿಗಳನ್ನು ತಲುಪಿಸಿದೆ.
ಭಾರತದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್ಎಡಿಆರ್) ದ ಭಾಗವಾಗಿ ನಡೆಯುತ್ತಿರುವ ಮಿಷನ್ ಸಾಗರ್ -3 ಅಡಿಯಲ್ಲಿ ಈ ಮಾನವೀಯ ನೆರವನ್ನು ಒದಗಿಸಲಾಗಿದೆ, ಸಾಂಕ್ರಾಮಿಕ ಸಮಯದಲ್ಲಿ ಸ್ನೇಹಪರ ವಿದೇಶಿ ದೇಶಗಳಿಗೆ ಸಹಾಯ ಮಾಡುವ ಸಲುವಾಗಿ ಮಿಷನ್ ಸಾಗರ್ ಅರಂಭಿಸಲಾಗಿದೆ.
ಮಧ್ಯ ವಿಯೆಟ್ನಾಂನ ಪ್ರವಾಹ ಪೀಡಿತ ಜನರಿಗೆ ಈ ಹಡಗು 15 ಟನ್ ಪಡಿತರವನ್ನು ತಲುಪಿಸಿದ್ದು, ಇದನ್ನು ರಾಷ್ಟ್ರೀಯ ವಿಪತ್ತು ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಜವಾಬ್ದಾರಿ ಹೊತ್ತಿರುವ ವಿಯೆಟ್ನಾಂನ ಕೇಂದ್ರ ಸ್ಟೀರಿಂಗ್ ಸಮಿತಿಗೆ ಹಸ್ತಾಂತರಿಸಲಾಯಿತು. ಈ ನೆರವು ಎರಡು ಸ್ನೇಹಪರ ರಾಷ್ಟ್ರಗಳ ನಡುವಿನ ಆಳವಾದ ಜನ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ.
SAGAR (Security And Growth for All in the Region) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ನಡೆಯುತ್ತಿದೆ. ಸ್ಮೇಹಪರ ರಾಷ್ಟ್ರಗಳಿಗೆ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಸ್ಥಾನವನ್ನು ಈ ಮಿಷನ್ ಪುನರುಚ್ಚರಿಸುತ್ತದೆ ಮತ್ತು ಭಾರತೀಯ ನೌಕಾಪಡೆಯು ಆದ್ಯತೆಯ ಭದ್ರತಾ ಪಾಲುದಾರನಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಿಷನ್ ಆಸಿಯಾನ್ ದೇಶಗಳಿಗೆ ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಮತ್ತು ಮಿತ್ರ ರಾಷ್ಟ್ರಗಳೊಂದಿಗೆ ಇರುವ ಬೆಸುಗೆಗಳನ್ನು ಮತ್ತಷ್ಟು ಬಲಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.