ನವದೆಹಲಿ: ಉತ್ತಮವಾಗಿ ಯೋಜಿಸಿದ ಲಾಕ್ಡೌನ್ ಕಾರಣದಿಂದಾಗಿ ಭಾರತ ಬಲಿಷ್ಠ ಆರ್ಥಿಕ ಪುನರುಜ್ಜೀವನವನ್ನು ಕಾಣುತ್ತಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಕೃಷಿ ಕ್ಷೇತ್ರದ ಸುಧಾರಣೆಗಳನ್ನು ಸಮರ್ಥಿಸಿಕೊಂಡ ಅವರು, ಇತರರಿಗೆ ಸಾಧ್ಯವಾಗದ ಕೆಲಸವನ್ನು ಮಾಡಲು ನರೇಂದ್ರ ಮೋದಿ ಸರ್ಕಾರಕ್ಕೆ ಧೈರ್ಯವಿದೆ ಎಂದು ಹೇಳಿದರು.
ಸಿಂಬಿಯಾಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಆಯೋಜಿಸಿದ ಉಪನ್ಯಾಸ ಸರಣಿಯಲ್ಲಿ ಠಾಕೂರ್ ಅವರು, “5 ಟ್ರಿಲಿಯನ್ ಯುಎಸ್ಡಿ ಆರ್ಥಿಕತೆ ಸಾಧನೆ: ಅವಕಾಶಗಳು ಮತ್ತು ಸವಾಲುಗಳು” ಕುರಿತು ಮಾತನಾಡಿದರು.
ವರ್ಷ 2020 ಒಂದು ಸಾಂಕ್ರಾಮಿಕ ವರ್ಷ, ಆದರೆ ಭಾರತವು ಐತಿಹಾಸಿಕ ಸುಧಾರಣೆಗಳು ಮತ್ತು ಅವಕಾಶಗಳ ವರ್ಷವಾಗಿ ಹೊರಹೊಮ್ಮಿದೆ ಎಂದಿದ್ದಾರೆ.
“ಈ ವರ್ಷ ಭಾರತವು ಜಾಗತೀಕರಣದ ಹೊಸ ದೃಷ್ಟಿಯನ್ನು ರೂಪಿಸಲು, ಮಾನವೀಯತೆಯ ಹಂಚಿಕೆಯ ಆಸಕ್ತಿಯನ್ನು ಕೇಂದ್ರೀಕರಿಸಲು ಅವಕಾಶವನ್ನು ನೀಡಿತು. ಈ ವರ್ಷ ಭಾರತವು ಜಾಗತಿಕ ಬೆಳವಣಿಗೆಯ ಎಂಜಿನ್ ಆಗಿ ಹೊರಹೊಮ್ಮುವ ಅವಕಾಶವನ್ನು ನೀಡಿದೆ” ಎಂದು ಠಾಕೂರ್ ಹೇಳಿದರು.
ಮೋದಿ ಸರ್ಕಾರ ಘೋಷಿಸಿದ 21 ಲಕ್ಷ ಕೋಟಿ ರೂ.ಗಳ ಆತ್ಮ-ನಿರ್ಭರ ಪ್ಯಾಕೇಜ್ ಜಿಡಿಪಿಯ ಶೇಕಡಾ 19 ರಷ್ಟಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.