ನವದೆಹಲಿ: ಕ್ರೀಡಾ ಸಚಿವ ಕಿರೆನ್ ರಿಜ್ಜು ಅವರು ಮಂಗಳವಾರ ವರ್ಚುವಲ್ ಆಗಿ ದೇಶದಾದ್ಯಂತ 8 ಖೇಲೋ ಇಂಡಿಯಾ ಸ್ಟೇಟ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಅನ್ನು ರಾಜ್ಯಗಳ ಕ್ರೀಡಾ ಮಂತ್ರಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು. ಈ 8 ಖೇಲೋ ಇಂಡಿಯಾ ಕೇಂದ್ರಗಳು ಮಣಿಪುರ, ಅರುಣಾಚಲ ಪ್ರದೇಶ, ಮಿಜೋರಾಂ, ಕೇರಳ, ತೆಲಂಗಾಣ, ನಾಗಾಲ್ಯಾಂಡ್, ಕರ್ನಾಟಕ ಮತ್ತು ಒಡಿಶಾದಲ್ಲಿ ಇವೆ.
ಈ ಸಂದರ್ಭದಲ್ಲಿ ಮಾತನಾಡಿದ ರಿಜ್ಜು, ಇದು ಭಾರತದ ಕ್ರೀಡೆಗಳಿಗೆ ಬಹಳ ಮಹತ್ವದ ದಿನವಾಗಿದೆ ಮತ್ತು ದೇಶದಲ್ಲಿ ಕ್ರೀಡಾ ಸಂಸ್ಕೃತಿ ಮತ್ತು ಉತ್ಕೃಷ್ಟತೆಯನ್ನು ಬೆಳೆಸಲು ಇದು ಬಹಳ ಮುಖ್ಯವಾದ ಆರಂಭವಾಗಿದೆ. ಭಾರತದ ಯುವಕರು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಉಪಕ್ರಮಗಳನ್ನು ಹುಡುಕುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡೆ ಪ್ರತಿಯೊಬ್ಬ ಭಾರತೀಯರಿಗೂ ಜೀವನ ವಿಧಾನವಾಗಿರಬೇಕು ಮತ್ತು ಎಲ್ಲರಿಗೂ ಮೂಲಭೂತ ಸೌಲಭ್ಯಗಳನ್ನು ಸೃಷ್ಟಿಸಲು ಭಾರತ ಸರ್ಕಾರ ಬಯಸಿದೆ ಎಂದು ಹೇಳಿದ್ದಾರೆ. ಖೇಲೋ ಇಂಡಿಯಾ ಸ್ಟೇಟ್ ಆಫ್ ಎಕ್ಸಲೆನ್ಸ್ ಅನ್ನು ರಾಷ್ಟ್ರೀಯ ಶ್ರೇಷ್ಠತೆಯ ಕೇಂದ್ರಗಳ ಜೊತೆಗೆ ಪ್ರಾರಂಭಿಸಲಾಗುತ್ತಿದೆ ಎಂದಿದ್ದಾರೆ.
ಲಾಸ್ ಏಂಜಲೀಸ್ ಒಲಿಂಪಿಕ್ಸ್ 2028ರಲ್ಲಿ ಭಾರತವನ್ನು ಅಗ್ರ 10 ರಲ್ಲಿ ನೋಡಬೇಕೆಂಬ ದೃಷ್ಟಿಯನ್ನು ಕೇಂದ್ರ ಸಚಿವರು ಪುನರುಚ್ಚರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಮತ್ತು ನಾವು ಅಗತ್ಯವಿರುವ ಎಲ್ಲ ಹಣಕಾಸಿನ ನೆರವು ನೀಡುತ್ತೇವೆ. ಇದರಿಂದ ಕ್ರೀಡಾಳುಗಳಿಗೆ ಸರಿಯಾದ ಮೂಲಸೌಕರ್ಯ ಮತ್ತು ಮಾನವಶಕ್ತಿ, ಕ್ರೀಡೆಗಳೊಂದಿಗೆ ಅಭಿವೃದ್ಧಿ ಹೊಂದಲು ಸಾಧ್ಯ. ವಿಜ್ಞಾನ, ಉತ್ತಮ ಗುಣಮಟ್ಟದ ತರಬೇತಿ ಅವರು ಪಡೆಯಬಹುದಾಗಿದೆ. ನಾವು ಕೇವಲ 1-2 ಪದಕಗಳಿಂದ ತೃಪ್ತರಾಗಲು ಸಾಧ್ಯವಿಲ್ಲ, 2028 ರ ಒಲಿಂಪಿಕ್ಸ್ನಲ್ಲಿ ನಾವು ಅಗ್ರ 10 ರಲ್ಲಿರಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.