ನವದೆಹಲಿ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮಬಂಗಾಳ ರಾಜ್ಯದ ರೈತರನ್ನು ತಲುಪಲು ಮತ್ತು ಹೊಸ ರೈತ ಮಸೂದೆಗಳ ಬಗ್ಗೆ ಅವರು ಭಯವನ್ನು ನಿವಾರಿಸಲು ಸಜ್ಜಾಗಿದ್ದಾರೆ.
ಡಿಸೆಂಬರ್ 19 ರಂದು ಬಂಗಾಳ ಪ್ರವಾಸದ ಮೊದಲ ದಿನದಂದು ಪೂರ್ವ ಮಿಡ್ನಾಪೋರ್ ನಗರಕ್ಕೆ ಭೇಟಿ ನೀಡಲಿರುವ ಶಾ ಅಂದು ರೈತರ ನಿವಾಸದಲ್ಲಿ ಊಟ ಮಾಡಲಿದ್ದಾರೆ ಮತ್ತು ಅದರ ನಂತರ ಮೋದಿ ಸರ್ಕಾರ ಜಾರಿಗೆ ತಂದ ಕೃಷಿ ಕಾನೂನುಗಳನ್ನು ಬೆಂಬಲಿಸಿ ದೊಡ್ಡ ಸಮಾವೇಶ ನಡೆಸಲಿದ್ದಾರೆ. 2018 ರಲ್ಲಿ ಪ್ರಧಾನಿ ಮೋದಿ ರೈತರ ಕಲ್ಯಾಣ ಸಮಾವೇಶವನ್ನು ನಡೆಸಿದ ಸ್ಥಳದಲ್ಲಿಯೇ ಶಾ ಈ ಸಮಾವೇಶ ನಡೆಸಲಿದ್ದಾರೆ.
ಶಾ ಅವರ ಪಶ್ಚಿಮ ಬಂಗಾಳ ಭೇಟಿ 2021 ಕ್ಕೆ ಮುಂಚಿತವಾಗಿ ಪಕ್ಷದ ಭಾರೀ ಚುನಾವಣಾ ಅಭಿಯಾನದ ಭಾಗವಾಗಿ ನಡೆಯುತ್ತಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021ರಲ್ಲಿ ಅಲ್ಲಿ ನಡೆಯಲಿದೆ.
ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ಯೋಜಿಸುತ್ತಿರುವುದರಿಂದ, ಬಂಗಾಳದ ರೈತರಿಗೆ ಶಾ ಅವರ ಸಮಾವೇಶ ಒಂದು ಮಹತ್ವದ ಘಟನೆಯಾಗಿ ಕಂಡುಬರುತ್ತಿದೆ. ಅವರಲ್ಲಿನ ಆತಂಕವನ್ನು ಶಾ ಅವರ ಸಮಾವೇಶ ನಿವಾರಿಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.