ನವದೆಹಲಿ: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ಇಂದು ಚಿಲಹತಿ-ಹಲ್ದೀಬಾರಿ ರೈಲು ಸೇವೆಗೆ ಜಂಟಿಯಾಗಿ ವರ್ಚುವಲ್ ವೇದಿಕೆಯಲ್ಲಿ ಚಾಲನೆ ನೀಡಿದರು. ಈ ರೈಲು ಸೇವೆಯಿಂದ ಬಾಂಗ್ಲಾದೇಶದಿಂದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಸಂಪರ್ಕ ದೊರೆಯಲಿದೆ. ಉಭಯ ಪ್ರಧಾನಿಗಳಿಂದ ಮಹಾತ್ಮ ಗಾಂಧಿ ಮತ್ತು ಶೇಕ್ ಮುಜಿಬುರ್ ರೆಹಮಾನ್ ಕುರಿತ ಬಾಪೂ-ಬಾಂಗಬಂಧು ಡಿಜಿಟಲ್ ಪ್ರದರ್ಶನ ಉದ್ಘಾಟನೆಯೂ ನಡೆದಿದೆ.
ಭಾರತ ಮತ್ತು ಬಾಂಗ್ಲಾದೇಶ ಸುಮಾರು 55 ವರ್ಷಗಳ ನಂತರ ಚಿಲಹತಿ-ಹಲ್ದೀಬಾರಿ ರೈಲು ಸಂಪರ್ಕವನ್ನು ಮತ್ತೆ ತೆರೆದಿರುವುದು ವಿಶೇಷ. 1965 ರ ಭಾರತ-ಪಾಕಿಸ್ಥಾನ ಯುದ್ಧದ ಸಮಯದಲ್ಲಿ ಇದನ್ನು ಸ್ಥಗಿತಗೊಳಿಸಲಾಗಿತ್ತು.
ಉಭಯ ರಾಷ್ಟ್ರಗಳ ನಡುವಿನ ಸಾರಿಗೆ ಮತ್ತು ಸಂಪರ್ಕವನ್ನು ವೃದ್ಧಿಸುವ ಗುರಿಯೊಂದಿಗೆ, ಉಭಯ ದೇಶಗಳ ನಡುವಿನ 1965ಕ್ಕೆ ಮುಂಚಿತವಾಗಿ ಇದ್ದ ಆರು ರೈಲು ಸಂಪರ್ಕಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಕಾರ್ಯಗತಗೊಳಿಸಲು ಎರಡೂ ಕಡೆಯ ನಾಯಕತ್ವ ಬದ್ಧತೆ ತೋರಿದೆ.
ಚಿಲಹತಿ-ಹಲ್ದೀಬಾರಿ ರೈಲು ಸಂಪರ್ಕವು ಕೋಲ್ಕತ್ತಾದಿಂದ ಸಿಲಿಗುರಿಗೆ ಹೋಗುವ ಬ್ರಾಡ್ ಗೇಜ್ ಮುಖ್ಯ ಮಾರ್ಗದ ಭಾಗವಾಗಿತ್ತು. ಆದರೆ, 1965 ರ ಯುದ್ಧವು ಉಭಯ ದೇಶಗಳ ನಡುವಿನ ಎಲ್ಲಾ ರೈಲ್ವೆ ಸಂಪರ್ಕಗಳನ್ನು ಕಡಿತಗೊಳ್ಳುವಂತೆ ಮಾಡಿತು. ಎರಡೂ ಕಡೆಗಳಲ್ಲಿ ಸುಲಭ ಸಂಚಾರವನ್ನು ಪುನರುಜ್ಜೀವನಗೊಳಿಸಲು, ರೈಲು ಸಂಪರ್ಕವನ್ನು ಪುನಃಸ್ಥಾಪಿಸಲಾಗುತ್ತಿದೆ, ಇದರಿಂದ ಸಂಪರ್ಕ ಹೆಚ್ಚುತ್ತದೆ ಮತ್ತು ಎರಡೂ ಕಡೆ ಜನರ ಬಾಂಧವ್ಯ ವೃದ್ಧಿಸುತ್ತದೆ.
ಚಿಲಹತಿ-ಹಲ್ದೀಬಾರಿ ರೈಲು ಸಂಪರ್ಕದ ಉದ್ಘಾಟನೆಯೊಂದಿಗೆ, ಆರು ರೈಲು ಸಂಪರ್ಕಗಳಲ್ಲಿ ಐದು ಕಾರ್ಯಗಳು ಕಾರ್ಯರೂಪಕ್ಕೆ ಬರಲಿವೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಇತರ ನಾಲ್ಕು ಕಾರ್ಯಾಚರಣೆಯ ರೈಲು ಸಂಪರ್ಕಗಳೆಂದರೆ ಪೆಟ್ರಾಪೋಲ್-ಬೆನಾಪೋಲ್, ಗೆಡೆ-ದರ್ಶನ, ಸಿಂಘಾಬಾದ್-ರೋಹನ್ಪುರ್ ಮತ್ತು ರಾಧಿಕಾಪುರ-ಬಿರೋಲ್. ಹಲ್ದೀಬಾರಿ-ಚಿಲಹತಿ ಮಾರ್ಗವು ಬಾಂಗ್ಲಾದೇಶದಿಂದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಸಂಪರ್ಕವನ್ನು ಹೆಚ್ಚಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.